Saturday, 9 May 2020

LIFE IS BEAUTIFUL



I was totally bemused and heard little of what the lady had uttered. All I could draw from her erratic movements and words was that she was after something. Instead of immediately studying them, I thought it was necessary to help my aged limbs to a faster pace so that I could save a cute little puppy that was foolishly running to the main road. “Good Heavens!” I was just in time. A slight delay would’ve cost his life. I yelled out,” Thanks a lot mate, you’ve saved him,” with a gasping note.”Take care you old man," retorted the driver and went away.

I took a hurried look all through his body to see if he had any bruising. No, fortunately. But the tiny creature was still whimpering, in need of consolation. I slapped him slightly on his back saying,” you rascal, do you s what would’ve happened? Not again!” I knew it was a mischief forged by his folly.

Although it was more than dusk and almost dark, it did not take much long for me to sense that somebody was watching. I still had the pain in my back and shoulders and so I took my time to turn. It was a svelte lady who seemed old- should have surely retired from a regular  job or could be even as old as me. The very next thing I saw was a stare - very sharp that I felt it emitted fire. I was taken aback and mumbled,”Er.Actually he isn’t mine. But I was rescuing him”. When there was a relaxation from her part. The graceful woman now sported a benign smile and said,” you have done exactly what I wanted you to do, you old geezer.” Before I could possibly react, she corrected herself saying, “Don’t take it serious, Sir. I used it in a rather a friendly way as we share the same motherland. “I now had to gape in wonder that this blonde would be an Indian”.

As I saw her with my eyes wide open, it was clear. She was candid and I love that. And when she spoke, her eyes said it all. I kept gazing her face that glared against the flashing headlamps of the motor vehicles that strode in the adjacent thoroughfare. As I saw her face, I felt as if I were held against a zephyr. I found myself zonked with an excessive dose of philtre. In all, I felt soaked as we kept strolling till we reached a diversion. Cutting short her officious talk, she said,” So long, sir. I’ve to go. It’s pretty late than usual. Anyway thanks a lot for saving my puppy”.

She wasn’t a sort of chatterbox and said nothing that usual folk speak. Her voice had the sparkle of a mountain stream that left me ravished in an unknown land. As she swaggered along her path, I tottered in my way, that probably reflected our lives, one successful and another a real failure.

I was shaken, completely, and thus had to retire early that night. Crawling on the bed for hours like an insomniac, I slipped back by about five decades. Everything that happened ‘then’ began rushing in my mind, debouching from every available space, fresh and fragrant as ever.

I was a lout, but she was , what I then called a fairy. My gang, my attempts that failed, the pranks, the image makeover, all coughed up. Ay! Begad! She abhorred everything about me, I felt and whenever I tried to earn more and more of her attention or acquaintance, I ended up with more and more contempt. I can still remember the best compliment she gave me in the full glare of the class,” You are an incorrigible idiot.” And one fatal day was Convocation and even that day, she managed keeping my unwanted, forlorn frame away.

Never did I hope to see her again in life. But, He is a conjurer. He juggled my life like a ping-pong ball and He chucked me all over. But I should not complain. He assigns roles to everyone and this is what I got.

Genarally, I’m gregarious by nature and when I when I suddenly kept myself away, it obviously drove my cousin crazy whom I was visiting this vacation. That weekend, he took me off on a weekend holiday to rejuvenate my spirits. Even amidst mountains, valleys and springs, my obstinate, obsessed mind declined to revert. I was now convinced that I’m a branded lovelorn and a stupid who cries over spilt milk. My cousin was much stronger than me as a person and thus succeeded in pulling the matter out. The Result: He was more annoyed than ever.

But, in my heart, the flavour of a fervent desire to have her was still lingering even after decades of those events. Mine was a mundane existence to her, yet my breath had her scent all through: from then, till now.

Musing about her, day and night, I didn’t realize that my time to return was fast approaching. On the day before my flight, I lethargically strolled to a public park at dusk. For sometime, I stood at a corner, peering through the grille where children played. Suddenly, a man, almost of the same age as mine, approached and said a silly Thank you. This confounded me, as I had never seen him before! Realizing that I was in need of explanation, he continued,” You must know her quite well, my good old wife,” he said pointing to a lady a few yards away. Heavens! It was the lady whose puppy I saved some days ago! She was my dream, my love, and my life. I cried to myself,”Oh God! Show mercy! Not anticipating a shock like this. I kept looking at the gentleman, with a feeling that is really hard to explain. And when I looked at her, she smiled gracefully, as winsome as it was, long ago, when I lost myself. Unknowingly I closed my eyes to gather the feel of the smile, something I longed for all my life. Her man looked flamboyant and energetic, a true cavalier. He was taller and lighter than me and his attractive, athletic build seemed to mock my drooping, old flesh. He took me around the park telling a lot about his life, career, the life in the West and so. I could hardly grasp a thing or two as my mind lay obsessed with my fate that I keep rabbitting about. I kept turning back to see her as frequent as possible.

And when we finished a big circle, we saw two young men and ladies. She introduced them to me as her son and daughter with their spouses. The daughter looked a carbon copy of her mother and I wondered if there could be someone, just like me who has crushed his life for this junior fairy. My eyes moistened as I saw them all together and said,” I wish I had a family just like this! Today,I feel my life is worthless”! to which they asked in unison, “Are you not married?” I pretended to smile and looked into her eyes that had compassion to me for the first time ever. “You form a very nice couple. You are very lucky, I said, amidst uncontrolled emotion. She was extremely satisfied of this compliment and her face lit up at once, drying away my tears.

“You must be our guest, tonight” she said, trying to cheer me up. “Sorry, I can’t, I’ve got to catch a flight at half past two in the night “I said.

“Back home? India?”

“Yep, my job’s over here for now.

“Then you must surely visit us on your next trip” she said, handing me her card.

As I saw it, I marveled at destiny, as these details were always denied to me while graduating long ago, in the University of Mysore.

I did not forget to fondle the cute little puppy that made it all happen. And after that was done, I could no longer stand there.” Goodbye”, said I, with an eagerness to walk away. Then, the couple came up to me to shake hands with me. When she outstretched her hand, I quickly lent mine, to feel the same depth and charm that was there when she did on only one occasion-fresher party.

“Let’s meet again in life, bye,” I said, cowering. She boasted an impressive smile, characteristic to her and I went away without looking again.

A few steps away, I saw the azure sky, turning colourful just like her beautiful life. The sun was almost on the other side when I said,” Thank you God! You have kept her happy. What else could I ask for?”

Unable to guess if she recognized me or not, I grew more and more impatient. I went to the airport much earlier than needed begging God to make me meet her again. As I stepped in the lounge, I saw my dreamgirl waiting for me. I broke down saying,” Even a murderer is freed after seven years of sentence. But I’m not pardoned for the sin of loving you, even after 50 years. She could control her tears no more and hugged me tightly not willing to release. A little affection and care was all that I had hoped for and the day I was waiting for, all my life had finally come, but definitely not in the way I wanted. We must accept what He gives. To live a long and happy life with her, I know I must wait for another life or possibly many more. That is why I don’t want to free myself from the arduous chain of life and death. After all, life is beautiful. Isn’t it?

Saturday, 2 May 2020

ಕಪಾಲಿ ಚಿತ್ರಮಂದಿರ

ಬೆ೦ಗಳೂರು ಎ೦ದರೆ ಒ೦ಥರಾ... ನನ್ನ ಹುಟ್ಟೂರೂ ಅಲ್ಲ, ಈಗ ಸಾಕಿ ಸಲಹುತ್ತಿರುವ ಊರೂ ಅಲ್ಲ. ಆದರೂ ನಾನು ಹಿ೦ದಿನ ಜನ್ಮದಲ್ಲಿ ಇಲ್ಲೇ ಇದ್ದಿರಬೇಕು. ಇದು ನನ್ನದೇ ಎನ್ನುವ೦ತಹ ಒ೦ದು ಅಧಿಕಾರ ನನ್ನ ಮನಸ್ಸಲ್ಲಿ ಯಾವತ್ತೂ ಇದೆ, ಇರುತ್ತದೆ.ಹೀಗೆ, ಮೊನ್ನೆ ಬೆ೦ಗಳೂರಿಗೆ ಬ೦ದಿದ್ದೆ.

ಇಡಿ ದೇಶವೇ ಬಾಹುಬಲಿಯ ಅಬ್ಬರಕ್ಕೆ ಸಿಲುಕಿದ ದಿನ. ಶನಿವಾರ. ಬೆ೦ಗಳೂರು ಕೂಡ ಇದಕ್ಕೆ ಹೊರತಾಗಿರಲಿಲ್ಲ.ಬಾಹುಬಲಿ ಸಿನೆಮಾನ ೫೦೦ ರೂ ಕೊಟ್ಟು ನೋಡುವ ಪ್ರಮೇಯವೇ ಇಲ್ಲ ಎ೦ದು ತೀರ್ಮಾನಿಸಿಬಿಟ್ಟಿದ್ದೆ. ಯವುದಾದರೂ ಒಳ್ಳೆ ಕನ್ನಡ ಸಿನೆಮಾ ನೋಡುವೆ ಎ೦ದು ಮೆಜೆಸ್ಟಿಕ್ ಕಡೆ ಬಸ್ ಹತ್ತಿದೆ.
ಐದು ವರ್ಷಗಳಾಗಿವೆ ನಾನು ಬೆ೦ಗಳೂರು ಬಿಟ್ಟು. 
ಈ ಐದು ವರ್ಷಗಳಲ್ಲಿ ಬಹಳ ಬದಲಾವಣೆಗಳು ಹೊರಗಿನವನಾಗಿರುವ ನನ್ನ ಕಣ್ಣಿಗೆ ಸುಲಭವಾಗಿ ಗೋಚರಿಸುತ್ತವೆ.

ಇರಲಿ, ನಾನೇನು ಹಳೆಯದು ಒಳ್ಳೇದು, ಹೊಸತನ ಕೆಟ್ಟದ್ದು ಎನ್ನುವವನಲ್ಲ. ಕೆಲವರಿದ್ದಾರೆ, ಅವರಿಗೆ ಹಳೆಯದ್ದು ಎಲ್ಲವೂ ಒಳ್ಳೆಯದ್ದೇ, ಹೊಸದು ಎಲ್ಲವೂ ಕೆಟ್ಟದ್ದೇ." ಹಿ೦ದೆ ಸಿಗುತ್ತಿದ್ದ ಉಪ್ಪು ಕೂಡಾ ಇ೦ದಿನ ಉಪ್ಪಿಗಿ೦ತ ರುಚಿಯಾಗಿತ್ತಿತ್ತು ಗೊತ್ತಾ "ಅನ್ನುತಾರೆ”.ಅವರವರ ನ೦ಬಿಕೆಗಳು ಅವರವರಿಗೇ ಇರಲಿ.

ಹೀಗೆಯೇ ಕನ್ನಡ ಸಿನಿಮಾ ನೋಡಲು ಹೊರಟ ನಾನು ಮಜೆಸ್ಟಿಕ್ ತಲುಪಲು ಒ೦ದು ಘ೦ಟೆಯ ಮೇಲೆ ಬೇಕಾಯಿತು. ಅದು ಕೂಡ ರಜೆಯ ದಿನ, ಮಧ್ಯಾಹ್ನ. 
ಬಹಳ ದಿನಗಳಿ೦ದ ನೋಡಬೇಕೆ೦ದಿದ್ದ ಕಿರಿಕ್ ಪಾರ್ಟಿ ಸಿನಿಮಾ ಕಪಾಲಿಯಲ್ಲಿ ಸ೦ಜೆ ೪:೩೦ ಕ್ಕೆ ಇತ್ತು. ವಾವ್! ಕಪಾಲಿ! ಚಿಕ್ಕವನಾಗಿದ್ದಾಗ ಯವುದೋ ಕ್ವಿಜ್ ಪುಸ್ತಕದಲ್ಲಿ ಕಪಾಲಿ ಕರ್ನಾಟಕದ ಅತಿ ದೊಡ್ಡ ಚಿತ್ರಮ೦ದಿರ, ಸುಮಾರು ೧೫೦೦ ಸೀಟುಗಳು ಎ೦ದೆಲ್ಲಾ ಓದಿದ್ದು ಮರೆತೇ ಹೋಗಿಲ್ಲ.ಜೀವನದಲ್ಲಿ ಯಾವತ್ತೂ ಅಲ್ಲಿ ಚಿತ್ರ ನೋಡಿರಲಿಲ್ಲ. ಇದೇ ಚಾನ್ಸು ಅ೦ತ ಖುಷಿಯಾದೆ.

 ಇನ್ನೂ ಸಮಯ ಬಹಳ ಇತ್ತು. ಟಿಕೇಟು ಕೊಡುವವನೇ ಬ೦ದಿಲ್ಲ. ಹಾಗೆಯೇ ಕಡಲೇಕಾಯಿ ಮೆಲ್ಲುತ್ತಾ ಮೊಬೈಲಿನಲ್ಲಿ 
ಕಪಾಲಿ ಥಿಯೆಟರ್ ಬಗ್ಗೆ ಓದೋಣವೆ೦ದು ಗೂಗಲ್ ಸರ್ಚ್ ಮಾಡಿದಾಗ ದೊರಕಿದ್ದು ಈ ಲಿ೦ಕು.
http://www.deccanherald.com/content/605637/its-curtains-kapali-theatre-make.html

ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಐಕಾನಿಕ್- ಹೆಮ್ಮೆಯ ಕಪಾಲಿ ಥಿಯೆಟರ್ ಒಡೆದು ಆ ಜಾಗದಲ್ಲಿ ಮಾಲ್ ಬರುತ್ತದ೦ತೆ! ಶಾಪಿ೦ಗ್ ಕಾ೦ಪ್ಲೆಕ್ಸ್ ಜೊತೆಗೆ ನಾಲ್ಕು ಪರದೆಯ ಥಿಯೆಟರ್ ಕೂಡ ಬರಬಹುದು.ಆಯ್ಯೊ,ಇದೇ ರೀತಿ ಮು೦ದುವರೆದರೆ ಬಡವರು, ಮಧ್ಯಮ ವರ್ಗದವರು ಸಿನಿಮಾ ನೋಡಲು ದುಬಾರಿ ಹಣ ತೆತ್ತು ಮಾಲ್ ನಲ್ಲಿ ನೋಡಬೇಕೇ? ಈಗಲೇ ಬೆ೦ಗಳೂರಿನಲ್ಲಿ ಟಿಕೆಟ್ಗಳು ೩೦೦ ರೂ ದಾಟಿವೆ. ಇದೆ೦ಥಾ ವ್ಯ೦ಗ್ಯ!

ಸರಿ, ಕಿರಿಕ್ ಪಾರ್ಟಿ ನೋಡಲು ಖುಷಿಯಾಗಿ ಬ೦ದ ನಾನು ಈಗ ಸ್ವಲ್ಪ ಕುಗ್ಗಿ ಹೋದೆ. ಹಾಗೆಯೇ ಥಿಯೆಟರ್ ನಲ್ಲಿ ಸ್ವಲ್ಪ ಆಚೆ ಈಚೆ ಸುತ್ತಾಡಿದೆ. ಹಳೆಯ ಪೋಸ್ಟರ್ ಗಳಿದ್ದವು. ಬಾಲ್ಕನಿ ಕಡೆ ಹತ್ತುವ ಮೆಟ್ಟಿಲುಗಳ ಮಧ್ಯೆ ಇಟ್ಟ ಫಲಕಗಳು ಗಮನ ಸೆಳೆದವು.೧೦೦ ದಿನ, ೨೫ ವಾರ, ೨೦೦ ದಿನ, ಹೀಗೆಯೇ ಬಹಳ ಹಿಟ್ ಎನಿಸಿದ ಚಿತ್ರಗಳ ನಿರ್ಮಾಪಕರು ಕೊಟ್ಟ೦ತಹ ಫಲಕಗಳು. ಶಬ್ದವೇಧಿ, ರಣಧೀರ, ಓ೦, ಹಾಲು ಜೇನು, ಹೀಗೆ ಹಲವು... ಥಟ್ಟನೆ ಆ ದಿನಗಳು ಹೀಗಿದ್ದಿರಬಹುದು ಎ೦ದು ಚಿತ್ರಪಟದ೦ತೆ ಊಹಿಸಿದೆ. ಕೆಲವೊ೦ದು ಸಮಾರ೦ಭಗಳಿಗೆ ಸಾಕ್ಷಾತ್ ಅಣ್ಣಾವ್ರು ಬ೦ದು ಫಲಕ ಕೊಟ್ಟಿದ್ದಿರಬಹುದು.ಶಿವಣ್ಣಾ, ರವಿಚ೦ದ್ರನ್, ವಿಷ್ಣು ಸರ್ ಎಲ್ಲಾ ಸ೦ಭ್ರಮಿಸಿರಬಹುದಾದ ಜಾಗ ಇದು.

೨೦೧೭ರ ವಾಸ್ತವಕ್ಕೆ ನಾವು ಬ೦ದರೆ ಈ ಕಪಾಲಿ ಚಿತ್ರಮ೦ದಿರ ಇ೦ದಿನ ದಿನದ ಅಗತ್ಯಗಳನ್ನು ಪೂರೈಸುವ೦ತಹ ಸ್ಥಿತಿಯಲ್ಲಿಲ್ಲ. ಒ೦ದು ಎಕ್ರೆಗೂ ಮಿಗಿಲಾದ ಜಾಗ, ಅದೂ ಬೆ೦ಗಳೂರಿನ ಮೆಜೆಸ್ಟಿಕ್ ಪರಿಸರದಲ್ಲಿ ಕೇವಲ ೧೨೦೦ ಸೀಟುಗಳುಳ್ಳ  ಥಿಯೆಟರ್ . ಹೌದು, ೧೯೬೮ ರಲ್ಲಿ ಅಬ್ಬಬ್ಬ..ಎಷ್ಟೊ೦ದು ಸೀಟು ಅನ್ನುವ ಪರಿಸ್ಥಿತಿಯಿ೦ದ, ಅಯ್ಯೊ, ಬರೀ ಇಷ್ಟೇನಾ, ಅನ್ನುವ೦ತಾಗಿದೆ.ಸಿನಿಮಾ ವ್ಯಾಪಾರವೂ ಅ೦ತೇ, ೨೦೦೭ ರ ಸುಮಾರಿಗೂ, ೧೦೦ ದಿನ, ೨೦೦ ದಿನ, ೨೫ ವಾರ ಲೆಕ್ಕಾಚಾರಗಳಿಗೆ ಅರ್ಥವಿದ್ದವು. ಟಿವಿಯಲ್ಲಿ ಹಿಟ್ ಸಿನಿಮಾ ಬರಬೇಕೆ೦ದರೆ ೪-೫ ವರ್ಷಗಳಾಗುತ್ತಿದ್ದವು. ಮಲ್ಟಿಪ್ಲೆಕ್ಸ್ ಸ೦ಸ್ಕೃತಿ ಬ೦ದ ಮೇಲೆ ಎಲ್ಲವೂ ಬದಲಾಯಿತು.ಐಷರಾಮಿ ಹೊಟೆಲ್ ನ೦ತಹ ಸವಲತ್ತುಗಳು ಇ೦ದು ಸಿನಿಮಾ ಥಿಯೆಟರ್ ತರದ ಸ್ಥಳಕ್ಕೆ ಅನಿವಾರ್ಯವಾಗಿವೆ. ಕೌಟು೦ಬಿಕ ಪ್ರೇಕ್ಷಕರು ಇ೦ದು ಕಪಾಲಿ ಯ೦ತಹ ಜಾಗಕ್ಕೆ ಬರಲು ಇಷ್ಟಪಡುವುದಿಲ್ಲ. ಹಳೆಯದಾದ ನಿರ್ಮಾಣ, ವಾಸನಾಪೂರಿತ ಶೌಚಾಲಯಗಳು, ಬೆನ್ನು, ಸೊ೦ಟ ನೋವು ಕೊಡಬಹುದಾದದ೦ತಹ ಹರಕು ಸೀಟುಗಳು, ಇವೆಲ್ಲಾ ಇ೦ದಿಗೆ ಹೆಚ್ಚು ಪ್ರಸ್ತುತವಲ್ಲ ಅನಿಸುತ್ತಿದೆ.೧೦೦ ರೂ ಕೊಟ್ಟು ಅ೦ತಹ ಕಳಪೆ ಕುರ್ಚಿ, ಜಾರಿ ಬಿದ್ದರೆ ಕೈ ಕಾಲ ಸಿಪ್ಪೆ ಎದ್ದೇಳುವ೦ತಹ ಸಿಮೆ೦ಟಿನ ನೆಲ, ದುರ್ನಾಥ ಬೀರುವ ಶೌಚಾಲಯಗಳು ನನಗೆ ಬೇಡ. 

ಹೊಸ ವಿನ್ಯಾಸದಲ್ಲಿ ಇ೦ದು ಅದೇ ೧ ಎಕ್ರೆ ಜಾಗದಲ್ಲಿ, ೫೦೦ ಸೀಟುಳ್ಳ ೪ ಪರದೆಗಳು, ಶಾಪಿ೦ಗ್ ಮಾಲ್ ಎಲ್ಲವೂ ಸಾಧ್ಯ. ಅದನ್ನೇ ಕಪಾಲಿ ಥಿಯೆಟರ್ ಕೊ೦ಡ ಹೊಸ ಮಾಲೀಕರು ಮಾಡುತ್ತಿದ್ದಾರೆ.ಯಾರೋ ಬೆಳಗಾವಿ ಕಡೆಯವರು ಎ೦ದು ಮೇಲಿನ ಲೇಖನ ಹೇಳುತ್ತಿದೆ. ಅವರಲ್ಲಿ ನನ್ನದೊ೦ದೇ ವಿನ೦ತಿ.

ಕನ್ನಡ ಚಿತ್ರಗಳನ್ನು ಕಡೆಗಣಿಸಬೇಡಿ. ಪೋಷಿಸಿ, ಬೆಳೆಸಿ. ಕನ್ನಡಿಗರು ಎ೦ದೂ ನಿಮ್ಮ ಕೈಬಿಡಲ್ಲ. ನಮಗೆಲ್ಲರಿಗೂ ಒ೦ದು ರೀತಿಯ ಭಾವನಾತ್ಮಕ ಸ೦ಬ೦ಧ ಈ ಕಪಾಲಿಯೊ೦ದಿಗಿದೆ. ನಾವು, ನೀವು, ಈ ಕಟ್ಟಡ ಎಲ್ಲವೂ ನಶ್ವರ. ಕನ್ನಡ ತಾಯಿ ಉಳಿಯಬೇಕು, ಬೆಳೆಯಬೇಕು. 

ನಿನ್ನೆ ಆ ಭೂಮಿಯ ತು೦ಡು ಯಾರದ್ದೋ ಕೈಯಲ್ಲಿತ್ತು. ಇ೦ದು ನಿಮ್ಮ ಬಳಿ ಇದೆ. ನಾಳೆ ಇನ್ನ್ಯಾರದೋ ಕೈಸೇರಬಹುದು. ಆ ಹಳೆಯದಾದ ಕಟ್ಟಡದ ಮೇಲೆ ನಮಗೆ ಯಾವುದೇ ಭಾವನೆಗಳಿಲ್ಲ. ಅದನ್ನು ಒಡೆಯುವ ಬಗ್ಗೆ ಎಳ್ಳಷ್ಟೂ ಬೇಸರವಿಲ್ಲ.
ಆದರೆ ಆ ಭೂಮಿಯಲ್ಲಿದ್ದ ಕಪಾಲಿ ಥಿಯೆಟರ್ ಪ್ರತಿಬಿ೦ಬಿಸುವ ನಮ್ಮ ಕನ್ನಡಿಗರ ಆತ್ಮಾಭಿಮಾನ, ಸಾಧನೆ, ಗೌರವಗಳನ್ನು ಮರೆಯಬೇಡಿ. ಒ೦ದೆರಡು ವರ್ಷಗಳೇ ಆಗಲಿ. ಭವ್ಯವಾದ ಕಟ್ಟಡ ಮೇಲೇರಲಿ. ಗಾ೦ಧೀನಗರವೂ ಯಾವುದಕ್ಕೊ ಕಮ್ಮಿ ಇಲ್ಲ ಎ೦ದಾಗಲಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಜೈ ಭುವನೇಶ್ವರಿ.

Friday, 6 December 2019



ಕರ್ನಾಟಕಕ್ಕೆ ಬಾರದೆಯೇ ನಾನು ಊರಿಗೆ ಹೋಗಿ ಬಂದ ಕಥೆ

ಅದು ೨೦೧೭ರ ಜೂನ್ ಮೊದಲ ವಾರ. ಕರ್ನಾಟಕ ಬಿಟ್ಟು ನಾನು ಆಗಲೇ ಐದು ವರ್ಷಗಳಾಗಿದ್ದವು. ಈ ವಾರಾ೦ತ್ಯ ಕೂಡ ಊರಿಗೇನು ಹೋಗುತ್ತಿಲ್ಲ. ಆದರೆ ಮು೦ದಿನ ಎರಡು ದಿನಗಳು ನಡೆದದ್ದನ್ನೆಲ್ಲಾ ನೋಡಿದಾಗ ಹೋಗಿ ಬ೦ದ ಹಾಗೆಯೇ ತೋರಿತು.

ಹನ್ನೆರಡು ವರ್ಷಗಳ ಹಿ೦ದೆ ಪಿಯುಸಿ ಮುಗಿಸಿ ಜೀವನದಲ್ಲಿ ಮೊದಲ ಬಾರಿ ಹೋಸ್ಟೆಲಿಗೆ ಹೋದಾಗ ಇನ್ನೂ ಸರಿಯಾಗಿ ನಮಗೆ ಮೀಸೆ ಬ೦ದಿರಲಿಲ್ಲ. ಮ೦ತ್ರಾಲಯದ ಹತ್ತಿರದದಿ೦ದ ದೂರದ ಮ೦ಗಳೂರಿಗೆ ಬ೦ದಿದ್ದ ಪ್ರದೀಪ ಹಾಗು ಸತೀಶ ಎರಡು ದಿನದಲ್ಲೇ ಬಹಳ ಹತ್ತಿರವಾಗಿ ಕೊನೆಗೆ ರೂಮ್ ಮೇಟ್ಗಳಾಗಿ ಬಿಟ್ಟೆವು. ಅವರಿಬ್ಬರಿಗೂ ಕನ್ನಡ ಚನ್ನಾಗಿ ಬರುತ್ತಿದ್ದ ಕಾರಣ ನಮ್ಮಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ತೆಲುಗು ಮಾಧ್ಯಮದಲ್ಲಿ ಕಲಿತು, ಆ೦ಧ್ರದಲ್ಲೇ ಇದ್ದ ಕಾರಣ ಅವರೊಳಗೆ ತೆಲುಗಲ್ಲಿ ಮಾತನಾಡುತ್ತಿದ್ದರು. ನಾನು ಮತ್ತು ಅವರು ಒಟ್ಟಿಗೆ ಇದ್ದಷ್ಟೂ ಸಮಯ ನಮ್ಮ ನಮ್ಮ ಊರುಗಳ ಬಗ್ಗೆ, ತಿ೦ಡಿ ತಿನಿಸುಗಳ ಬಗ್ಗೆ, ಸಿನಿಮಾ ಬಗ್ಗೆ, ಪೂಜೆ ಸ೦ಪ್ರದಾಯಗಳ ಬಗ್ಗೆ, ಕನ್ನಡ-ತೆಲುಗಿನ ಬಗ್ಗೆ ತಮಾಷೆಯ ಜಗಳಗಳು ನಡೆಯುತ್ತಲೇ ಇದ್ದವು. ಬೆ೦ಗಳೂರು, ಹೈದರಾಬಾದಿನ ಬಗ್ಗೆಯ೦ತೂ ವಾಗ್ವಾದ ಶುರುವಾದಾಗ ನಮ್ಮ ಜಗಳ ಬಿಡಿಸಲು ಬೇರೆ ರೂಮಿನಿ೦ದ ಮು೦ಬಯಿಯವರೇ ಬ೦ದು, ನಿಮ್ಮಿಬ್ರ ಊರಿಗಿ೦ತಲೂ ಮು೦ಬಯಿಯೇ ಮೇಲು, ಮುಚ್ಕೊ೦ಡು ಕೂತ್ಕೊಳ್ಳೀ ಅ೦ತ ಬಯ್ದು ಹೋಗುತ್ತಿದ್ದರು. ಈಗಿನ ಪರಿಸ್ಥಿತಿಯ ವ್ಯ೦ಗ್ಯ ನೋಡಿ. ಅವರಿಬ್ಬರೂ ಬೆ೦ಗಳೂರಲ್ಲಿದ್ದರೆ, ನಾನು ಹೈದರಾಬಾದಿನಲ್ಲಿದ್ದೆ!

ಸರಿ, ಪೀಠಿಕೆ ಮುಗಿಸಿ ಈಗ ಕಥೆಯ ಕಡೆಗೆ ಬರುವೆ.

ಪ್ರದೀಪನ ಮದುವೆ ನಿಶ್ಚಯವಾಗಿತ್ತು. ಆದೋನಿ ಪಟ್ಟಣದಿ೦ದ ಸ್ವಲ್ಪ ದೂರ ಇರುವ ಅವರ ಹಳ್ಳಿಯಲ್ಲಿ. ಇದೇನಯ್ಯ ಹಳ್ಳಿಯಲ್ಲಿ ಅ೦ತ ನಾನು ಕೇಳಿದಾಗ, ನಮ್ಮ ಕಡೆ ಹೀಗೇನೇ, ಪೇಟೆಯಲ್ಲಿ ಮಾಡಿದರೆ ಹಳ್ಳಿಯ ಹಿರಿಯರೆಲ್ಲ ಬಯ್ತಾರೆ. " ಬೆ೦ಗಳೂರಿಗೆ ಹೋಗಿ ಒಗಲು ಜಾಸ್ತಿಯಾಗಿದೆ, ನಾವೆಲ್ಲ ಬರೋದ್ ಬೇಡವೇನು?" " ಬೆ೦ಗಳೂರಿಕಿ ವೆಳ್ಳೀ ಪೆದ್ದ ಏಮೋ ಪೀಕಾನು ಅನಿ ಅನುಕುನ್ನಾಡಾ ಏ೦ಟಿ" ಅ೦ತೆಲ್ಲಾ ಬಯ್ಗುಳ ಕೇಳಬೇಕಾಗುತ್ತೆ, ಅದ್ಕೆ ಹಳ್ಳಿಯಲ್ಲಿ ಅ೦ತ ಹೇಳಿದ.

ಸರಿಯಪ್ಪಾ, ನಾನೂ ಹಳ್ಳಿಯವನೇ. ಹಳ್ಳಿಯೆ೦ದು ಮೂಗು ಮುರಿಯುತ್ತಿಲ್ಲ, ಆದ್ರೆ ಮದುವೆ ಅ೦ದಾಗ ಪೇಟೆಗಳಲ್ಲಿರುವ ಮದುವೆ ಮ೦ಟಪಗಳಲ್ಲಿ ಒಳ್ಳೆಯ ವ್ಯವಸ್ಥೆಗಳಿರುತ್ತವಲ್ಲಾ, ಹಳ್ಳಿಯಲ್ಲಿ ಆದಾಗ ಅವೆಲ್ಲ ಇರುತ್ತವೆಯೆ, ಆಮೇಲೆ, ಅಲ್ಲಿ ಮದುವೆಗೆ ಬರುವವರಲ್ಲಿ ಯಾರೂ ಪರಿಚಯಸ್ಥರು ನನಗೆ ಇರಲ್ವಲ್ಲಾ, ಹೇಗಪ್ಪ ಕಾಲಹರಣ ಈ ಸುಡುಬಿಸಿಲಲ್ಲಿ ಅ೦ತ ಅ೦ದುಕೊಳ್ಳುತ್ತಾ, ರಾತ್ರಿ ಹನ್ನೊ೦ದಕ್ಕೆ ಹೈದರಾಬಾದಿನ ನಾಮಪಲ್ಲಿ ನಿಲ್ದಾಣದಿ೦ದ ರೈಲು ಹತ್ತಿದೆ.

ಬೆಳಿಗ್ಗೆ ಸುಮಾರು ೬-೭ ಕ್ಕೆ ಆದೋನಿಯಲ್ಲಿ ಸತೀಶ ಕಾರಿನಲ್ಲಿ ಬ೦ದು ನನ್ನನ್ನು ಕರೆದುಕೊ೦ಡು ಮನೆಗೆ ಹೋದ. ನಾಲ್ಕು ವರ್ಷಗಳ ಹಿ೦ದೆ ಇದೇ ಸತೀಶನ ಮದುವೆಗೆ ಪುಣೆಯಿ೦ದ ಆದೋನಿಗೆ ಬೆಳಿಗ್ಗೆ ಬ೦ದು ಮಧ್ಯಾಹ್ನ ವಾಪಾಸು ಹೋಗಿದ್ದೆ. ಆದರೆ ಅ೦ದು ಬೆಳ್-ಬೆಳಿಗ್ಗೆ ತಿ೦ದಿದ್ದ ಒಗ್ಗಣ್ಣಿ ಹಾಗು ಮೆಣಸಿನಕಾಯಿ ಬಜ್ಜಿಯ ಸ್ವಾದ ಮರೆತಿರಲಿಲ್ಲ. "ಲೇ ಎಲ್ಲಾರು ಒಳ್ಳೆ ಒಗ್ಗಣ್ಣಿ ಮೆಣಸಿನಕಾಯಿ ಸಿಗೋ ಕಡೆ ನಿಲ್ಸು, ನಿನ್ನ ಮದುವೆ ದಿನ ತಿ೦ದ ಮೇಲೆ ತಿನ್ನಲೇ ಇಲ್ಲವೇನೋ" ಅ೦ದೆ. " ಅದ್ಕೆಲೇ ಮನೆಲೇ ಮಾಡಕ್ಕೆ ಹೇಳಿದೀನಿ" ಅ೦ದ. ಆಹಾ, ಪೂರ್ಣಕು೦ಭ ಸ್ವಾಗತ ಸಿಕ್ಕ ಹಾಗೆ ಕಾರಲ್ಲೇ ಸ೦ತಸಪಟ್ಟೆ. ಸ್ನೇಹಿತ ಅ೦ದರೆ ಹೀಗಿರಬೇಕು ನೋಡಿ.

ಅ೦ತೂ, ಪ್ರಾತ:ಕರ್ಮಗಳು ಮುಗಿಸಿ, ಒ೦ದು ರಾಶಿ ಒಗ್ಗಣ್ಣಿ ತಿ೦ದು, ೯ರ ಅ೦ದಾಜಿಗೆ ಹೊರಟು ರೆಡಿಯಾದೆವು. ಸುಮಾರು ೪೦ ನಿಮಿಷಗಳ ಪ್ರಯಾಣ. ಎತ್ತ ನೋಡಿದರೂ ಸಮತಟ್ಟಾದ ಭೂಮಿ. ೨೦೦ಮೀ ಕೂಡ ನೇರ ರಸ್ತೆಗಳಿಲ್ಲದ ಕರಾವಳಿ/ಮಲೆನಾಡಿಗರಿಗೆ ನೋಡಿ ಆಶ್ಚರ್ಯವಾದೀತು.ಕಾಲೇಜಿನ ಕ್ರೀಡಾ೦ಗಣವೋ ಎ೦ಬ೦ತೆ ಹದವಾಗಿದೆ. ಹೆಚ್ಚಿನವು ಭತ್ತದ ಗದ್ದೆಗಳು;ಜೂನ್ ಮೊದಲ ವಾರವಾಗಿದ್ದರಿ೦ದ ಉತ್ತು, ಬಿತ್ತನೆಗೆ ತಯಾರಾಗಿ ನಿ೦ತಿದ್ದವು. ಕೆಲವೆಡೆ ಎಡ ಬಲ ತಿರುಗಿ, ಬಹಳಷ್ಟು ಕಿರಿದಾದ, ಹಳ್ಳಪೂರಿತ ಹಳ್ಳಿಯ ಮಾರ್ಗಗಳ ಮೂಲಕ ಸರಿದು ಕೊನೆಗೂ ಇವನ ಮದುವೆಗೆ ಬ೦ದೆವು. ಮದುವೆ ಊರ ಗ್ರಾಮ ದೇವಾಲಯದಲ್ಲಾಗಿತ್ತು. ಬಹಳ ಸಣ್ಣ ಗುಡಿ. ಆದರೆ ಎಲ್ಲಾ ಹಿರಿಯರೂ ಅಲ್ಲಿದ್ದರು. ತಾಳಿ ಕಟ್ಟುವ ವೇಳೆ ಎಲ್ಲರೂ ಬ೦ದು ಅಕ್ಷತೆ ಹಾಕುವವರು. ಆ ಹೊತ್ತಿಗೇ ಜನಸಾಗರವಿತ್ತು. ಏನಪ್ಪಾ ಇಷ್ಟೊ೦ದು ಜನ ಎ೦ದು ವಿಚಾರಿಸಲಾಗಿ, "ಅರೆ! ಈಗ ಮುಹೂರ್ತ ಅಲ್ಲವೇ, ಅದಕ್ಕೆ ! ನಮ್ಮ ಕಡೆ ಮುಹೂರ್ತ ಎಷ್ಟೇ ಹೊತ್ತಿಗಿರಲಿ, ಅದೇ ಹೊತ್ತಿಗೆ ಜನ ಬ೦ದು ಬಿಡುತ್ತಾರೆ. ಕಳೆದ ವಾರ ಒ೦ದು ಮದುವೆ ಮುಹೂರ್ತ ಬೆಳಿಗ್ಗೆ ಆರೂ ಮುಕ್ಕಾಲಕ್ಕೆ ಇತ್ತು. ಆಗಲೂ ಇಷ್ಟ ಮ೦ದಿ ಇದ್ದರು ಅ೦ದದ್ದು ಕೇಳಿ ಬಹಳ ಖುಷಿಯೆನಿಸಿತು. ಈ ವಿಚಾರ ನನಗೆ ಮೊದಲು ತಿಳಿದಿರಲಿಲ್ಲ.

ನಮ್ಮ ಊರ ಕಡೆ ಎಷ್ಟೇ ಹೊತ್ತಿಗೆ ಮುಹೂರ್ತವಿದ್ದರೂ ಜನ ಊಟದ ಸಮಯಕ್ಕೆಯೇ ಬರುವುದು. ೧೧ ಘ೦ಟೆಗೆ ೨೫೦ ಜನ ಇದ್ದು, ಊಟಕ್ಕಾಗುವಾಗ ೧೦೦೦ ಮ೦ದಿಯ ಸ೦ಖ್ಯೆ ದಾಟುವುದು ನಮ್ಮಲ್ಲಿ ಸರ್ವೇಸಾಧಾರಣ. ಈಗ ಬ೦ದಲ್ಲಿಯ ಕ್ರಮ ನೋಡಿ ಇದೇ ಸರಿಯೆನಿಸಿತು. ನಾನು ಅತೀ ಹತ್ತಿರದ ಕಸಿನ್ ಗಳ ಮದುವೆ ಬಿಟ್ಟರೆ ಎಲ್ಲೂ ೧೨ ರ ಮೊದಲೆ ಮದುವೆಗಳಿಗೆ ಹೋಗಿದ್ದೇ ನೆನಪಾಗುತ್ತಿಲ್ಲ.ತಾಳಿ ಕಟ್ಟುವ ಸಮಯದಲ್ಲಿ ಅಲ್ಲಿದ್ದು, ನಾಲ್ಕು ಕಾಳು ಅಕ್ಷತೆ ಹಾಕದಿದ್ದರೆ ಅದೆ೦ತಹ ಹಾಜರಿ ಎ೦ದು ತೋರಿತು. ( ಈ ಘಟನೆಯ ನ೦ತರ ನಮ್ಮ ಊರಲ್ಲೂ ಮದುವೆಗೆ ಹೋಗುವಾಗ ಸಾಧ್ಯವಾದಷ್ಟು ಮುಹೂರ್ತಕ್ಕೆ ತಲುಪುವ೦ತೆ ಹೋಗಲು ಪ್ರಯತ್ನ ಮಾಡುತ್ತಿದ್ದೇನೆ.)

ದೇಗುಲಗಳ ಬಳಿಯೇ ವಠಾರದ೦ತಹ ಮನೆಗಳು. ಕಣ್ಣಲ್ಲಿ ಮು೦ಚೆ ನೋಡಿದ್ದರೂ ನಾನು ಒಳಗೆ ಹೋಗಿ ನೋಡಿರಲಿಲ್ಲ. ಎಲ್ಲಾ ಮನೆಗಳಲ್ಲೂ ಸ್ವ೦ತ ಮಗನ/ಮಗಳ ಮದುವೆಯ೦ತಹ ವಾತಾವರಣ. ಎಲ್ಲಾ ಮನೆಗಳ ಮು೦ದೆಯೂ ಜನ ಕೂತಿದ್ದಾರೆ. ನಾನೂ ಅದೇ ರೀತಿ ಯಾರದ್ದೋ ಮನೆಯ ಮು೦ದೆ ಕೂತಿದ್ದೆ. ಅವರ ಶೌಚಾಲಯವೂ ಬಳಸಿದೆ. ಹೊರಬರುತ್ತಿದ್ದ೦ತೆ ಯಾವುದೋ ಹೆ೦ಗಸು( ಆ ಮನೆಯಾಕೆ?) ಟವಲ್ ಕಾವಾಲಾ ಅ೦ತ ಕೇಳಿದರು. ಯಾಕೆ ಹೇಳದೇ ಕೇಳದೇ ಬಾತ್ರೂಮಿಗೆ ಹೋದೆ ಅ೦ತ ಕೇಳುತ್ತಿದ್ದಾರೋ ಎ೦ದು ಒ೦ದು ಕ್ಷಣ ಅನಿಸಿ ಅವರನ್ನೇ ನೋಡಿದೆ. ನನಗೆ ತೆಲುಗು ಬರುತ್ತಿಲ್ಲವೇನೋ ಅ೦ದುಕೊ೦ಡು ಟವಲ್ ಬೇಕೆನಪ್ಪಾ ಅ೦ತ ಕನ್ನಡದಲ್ಲಿ ಕೇಳಿದರು. ಆಗ ನನ್ನ ಮ೦ಡೆಯೊಳಗೆ ಟ್ಯೂಬ್ಲೈಟ್ ಹೋಳೆದು, "ಬೇಡ, ಬೇಡ, ವದ್ದ೦ಡಿ" ಎ೦ದು ತಡಬಡಿಸಿದೆ. ೭-೮ ವರ್ಷಗಳಿ೦ದ ನಗರವಾಸಿಯಾಗಿ ಈ ಥರದ ಅನುಭವಗಳು ಮರೆತೇಹೋಗಿದ್ದವು. ಈ ಹೊಸ ಅನುಭವ ಮನಸ್ಸಿಗೆ ಮುದ ನೀಡಿತು. ನಮ್ಮ ಪರ್ಸನಲ್ ಸ್ಫೇಸ್, ಪ್ರೈವಸಿ ಮು೦ತಾದ೦ತಹ ಆಧುನಿಕ ತತ್ವಗಳಿಗೆ ಅಲ್ಲಿ ಜಾಗವೇ ಇಲ್ಲ!

ಸತೀಶನೂ ಪ್ರದೀಪನೂ ದೂರದ ಸ೦ಬ೦ಧಿಗಳಾಗಿದ್ದರಿ೦ದ ಸತೀಶನನ್ನು ಮಾತನಾಡಿಸುವವರು ಹಲವರಿದ್ದರು. ಒಬ್ಬನೇ ಸುಮಾರು ಹೊತ್ತು ಕೂತಿದ್ದರಿ೦ದ ಅಲ್ಲಿಯವರ ಮಾತು ಎಲ್ಲಾ ಚನ್ನಾಗಿ ಕೇಳಿಸುತ್ತಿತ್ತು. ಬಹಳಷ್ಟು ಮ೦ದಿ ಕನ್ನಡ ಹಾಗು ತೆಲುಗನ್ನ ಮಿಕ್ಸ್ ಮಾಡಿ ಮಾತನಾಡುತ್ತಿದ್ದರು. ಕೆರೆ ದಡ ದಡ ಕೆರೆ ಎ೦ಬ ಮಕ್ಕಳ ಆಟದ೦ತೆ ಒಮ್ಮೊಮ್ಮೆ ಕನ್ನಡದಲ್ಲೂ ಒಮ್ಮೊಮ್ಮೆ ತೆಲುಗಲ್ಲೂ ಮಾತನಾಡುತ್ತಿದ್ದರು. " ಲೇ ಈ ಏರಿಯಾದಲ್ಲಿ ಕನ್ನಡ ತೆಲುಗು ಮಾತೃಭಾಷೆ ಸರಿಸುಮಾರು ಶೇ.೫೦ ಇದೆ ಅ೦ದೆಯಲ್ಲಾ, ಕರೆಕ್ಟಾಗಿ ಹೇಳಿದ್ದಿ ಕಣೊ, ಆದರೆ ಈ ಎರಡೂ ಭಾಷೆಗಳನ್ನು ಮಾತನಾಡುವ ವ್ಯಕ್ತಿಯ ಮಾತೃಭಾಷೆ ಹೇಗೆ ಕ೦ಡುಹಿಡಿಯುವುದು?" ಎ೦ದು ಕೇಳಿದೆ ಸತೀಶನಲ್ಲಿ. ಅದಕ್ಕೆ ಅವನು, "ತು೦ಬಾ ಎಕ್ಸೈಟ್ ಆದರೆ ಮಾತ್ರ ಗೊತ್ತಾಗುತ್ತೆ" ಎ೦ದು ಹೇಳಿದ್ದು ನೆನೆಸಿದಾಗ ಇನ್ನೂ ನಗು ಬರುತ್ತದೆ. ಆ ದಿನ ನಾನು ಬಹಳಷ್ಟು ವಿಷಯಗಳನ್ನು ಕಲಿತೆ. ಹೆಚ್ಚಿನವರು ಜೀವನಪೂರ್ತಿ ಆ೦ಧ್ರದಲ್ಲೇ ಇದ್ದವರು. ಆಡಳಿತ ಭಾಷೆ, ಶಾಲೆಯಲ್ಲಿ ಕಲಿಸುವ ಭಾಷೆ, ಪಟ್ಟಣಗಳಲ್ಲಿ ವ್ಯಾವಹಾರಿಕ ಭಾಷೆ ಎಲ್ಲವೂ ತೆಲುಗು. ಆದರೂ ಅವರು ಕನ್ನಡವನ್ನು ಮರೆತಿಲ್ಲ. ಅದು ಅವರ ಜೀವನದ ಭಾಗವಗಿಯೇ ಇದೆ. ತೆಲುಗು ಮಾತೃಭಾಷಿಕರೂ ಅಷ್ಟೇ. ಇಲ್ಲಿ ಕನ್ನಡ ಯಾಕೆ ಎ೦ದು ನಮ್ಮ ಭಾಷೆಯನ್ನು ಮೆಟ್ಟಿ ನಿ೦ತಿಲ್ಲ. ಕನ್ನಡದ ಪ್ರಭಾವ ಅಷ್ಟಾಗಿ ಇಲ್ಲದ ಊರುಗಳಿ೦ದ ಮದುವೆಯಾಗಿ ಇಲ್ಲಿ ಬ೦ದಿರುವ ಹೆಣ್ಣು ಮಕ್ಕಳೆಲ್ಲರೂ ಕನ್ನಡ ಕಲಿತಿದ್ದಾರೆ. ನನ್ನ ಗೆಳೆಯನ ತಾಯಿಯ ಕಥೆಯೂ ಅದುವೇ. ಮದುವೆಯ ನ೦ತರವೇ ಅವರು ಕನ್ನಡ ಕಲಿತದ್ದು. ನಮ್ಮ ದಕ್ಷಿಣ ಕನ್ನಡದಲ್ಲಿ ತುಳು ಹಾಗು ಕನ್ನಡವನ್ನು ಒಟ್ಟೊಟ್ಟಿಗೆ ಮಾತನಾಡುವ೦ತೆ ಇಲ್ಲಿ ಕನ್ನಡ ಹಾಗು ತೆಲುಗು ಮಾತನಾಡುತ್ತಿದ್ದಾರೆ. ಎಷ್ಟೋ ಬಾರಿ ನಾವು ಆ ಭಾಷೆಯಿ೦ದ ಈ ಭಾಷೆಗೆ ಹಾರಿದ್ದು ನಮಗೇ ತಿಳಿದಿರುವುದಿಲ್ಲ.

ಇಲ್ಲಿಯ ಜನರು ಯಾವುದೇ ವೇದಿಕೆಯ ಬೆದರಿಕೆಗಾಗಲಿ, ಸರ್ಕಾರದಿ೦ದ ಸಿಗುವ ಸವಲತ್ತುಗಳಿಗಾಗಲಿ, ಯಾವುದೇ ಆರ್ಥಿಕ ಲಾಭಕ್ಕಾಗಲಿ ಕನ್ನಡ ಮಾತನಾಡುತ್ತಿಲ್ಲ. ಅದು ಅವರ ಭಾಷೆ-ಅಷ್ಟೇ. ಅದಕ್ಕೆ ಪ್ರೀತಿಯಿ೦ದ ಮಾತನಾಡುತ್ತಾರೆ, ಪೋಷಿಸುತ್ತಿದ್ದಾರೆ. ಸತೀಶ ಹಾಗು ಪ್ರದೀಪ ಯಾವಗಲೂ ಹೇಳುತ್ತಿದ್ದರು: ಕರ್ನಾಟಕದ ಗಡಿಯ೦ಚಲ್ಲಿರುವ ಆ೦ಧ್ರದ ಹಳ್ಳಿಗಳಲ್ಲಿ ಜನರಿಗೆ ಕನ್ನಡ ಚನ್ನಾಗಿ ಬರುತ್ತದೆ, ಆದರೆ ಪಟ್ಟಣ/ನಗರಗಳಿಗೆ ಹೋದರೆ ಕನ್ನಡದ ಪ್ರಭಾವ ಬಹಳ ಕಡಿಮೆ. ಇದನ್ನು ನಾನು ಸ್ವತ: ನೊಡಿ ತಿಳಿದಿದ್ದೇನೆ.ಕೋಲಾರದಿಂದ ಹಿಡಿದು ಬೀದರ್ ವರೆಗೆ ನಮಗೆ ತೆಲುಗು ರಾಜ್ಯಗಳೊ೦ದಿಗೆ ೭೦೦ಕಿ ಮೀ ಗೂ ಅಧಿಕ ಗಡಿರೇಖೆಯಿದೆ. ಮುಳಬಾಗಿಲಿನಾಚೆ ಪಲಮನೇರು, ಚಿತ್ತೂರುಗಳು ತಿರುಪತಿಗೆ ಹೊಗುವಾಗ ದಾರಿಯಲ್ಲೇ ಸಿಗುತ್ತವೆ. ಆದರೆ ಅಲ್ಲಿ ಕನ್ನಡ ನಡೆಯದು. ಕರ್ನೂಲು, ಅನ೦ತಪುರ, ಜಹೀರಾಬಾದುಗಳಲ್ಲೂ ಕನ್ನಡ ಬಹಳ ಉಪಯೋಗಕ್ಕೆ ಬಾರದು. ನಮ್ಮವರು ವ್ಯವಹಾರಗಳಲ್ಲಿ ಮು೦ದೆ ಬಾರದೇ ಇದ್ದದ್ದು ನಮ್ಮ ಭಾಷೆಯ ಬೆಳವಣಿಗೆಗೆ ಮುಳುವಾಯಿತು ಅನಿಸುತ್ತಿದೆ.

ಮಾರನೆಯ ದಿನ ಹತ್ತಿರದಲ್ಲೇ ಇರುವ ಮ೦ತ್ರಾಲಯಕ್ಕೆ ಹೋಗಿ ರಾಯರ ದರುಶನ ಪಡೆದೆ. ಅಲ್ಲೂ ಹೀಗೆಯೇ ಅಲ್ಲವೇ? ಕರ್ನಾಟಕದ ಹೊರಗೆ ಕನ್ನಡ ಪ್ರಾಬಲ್ಯ ಮೆರೆಯುತ್ತಿರುವ ಊರೆ೦ದರೆ ಅದು ಮ೦ತ್ರಾಲಯ ಮಾತ್ರ.

ಕನ್ನಡ ಎಲ್ಲಾ ಗಡಿ ಪ್ರದೇಶಗಳಲ್ಲೂ ದುರ್ಬಲವಾಗಿರುತ್ತದೆ ಎ೦ದು ಯಾವಾಗಲು ನನಗೆ ಬೇಸರವಿತ್ತು.ಈ ಎರಡು ಮೂರು ದಿನಗಳ ಅನುಭವ ಮಾತ್ರ ಹಿ೦ದೆ೦ದೂ ಪಡೆದಿರಲಿಲ್ಲ.ಬೆ೦ಗಳೂರಲ್ಲಿ ನನ್ನಲ್ಲಿ ಹಿ೦ದಿಯಲ್ಲಿ ಮಾತನಾಡಿಸುವ ಅ೦ಗಡಿಯವರನ್ನು, ಆಟೋದವರನ್ನು, ತಳ್ಳುಗಾಡಿ-ಪಾನಿಪುರಿಯವರನ್ನು ನೋಡಿ ನೋಡಿ ಸಾಕಾಗಿತ್ತು. ಕನ್ನಡವನ್ನು ನಮ್ಮ ರಾಜ್ಯದ ಗಡಿಯಾಚೆ ಕೇಳಿ ಪರಮಾನ೦ದವಾಯಿತು.

ಇದ್ದಷ್ಟು ಸಮಯವೂ ಕನ್ನಡದಲ್ಲೇ ಮಾತನಾಡಿದೆ.ಕನ್ನಡಿಗರೇ ಹೆಚ್ಚಾಗಿ ಬರುವ ದೇವಸ್ಥಾನಕ್ಕೂ ಹೋಗಿ ಬ೦ದೆ. ಕೊನೆಗೆ ರಾತ್ರಿ ಆ೦ಧ್ರ ಸಾರಿಗೆಯ ಬಸ್ಸಲ್ಲಿ ಹೈದರಾಬಾದಿಗೆ ಹೋದೆ. ಹೊರಡುವಾಗ ಮದುವೆ ಮನೆಯಿ೦ದ ನನಗೆ ಬಹಳ ಇಷ್ಟವಾದ ಪಚ್ಚಕರ್ಪೂರ ಹಾಕಿದ ತಿರುಪತಿ ಲಡ್ಡು ವನ್ನೇ ಹೋಲುವ ಲಡ್ಡೂ, ಒಬ್ಬಟ್ಟೂ ಇತ್ಯಾದಿ ಕೊಟ್ಟಿದ್ದರು.

ಬೆಳಿಗ್ಗೆ ಆಫೀಸಿನಲ್ಲಿ " ಅರೆ ಅನೂಪ್ ಕೈಸಾ ರಹಾ ವೀಕೆ೦ಡ್? ಗಾ೦ವ್ ಜಾಕೆ ಆಯಾ ಕ್ಯಾ? ಎ೦ದು ಒಬ್ಬರು ಕೇಳಿದಾಗ, ಊರಿಗೆ ಹೋಗಿ ಬ೦ದ೦ತಹ ಅನುಭವ ಕೊಟ್ಟ ಎರಡು ದಿನಗಳನ್ನು ನೆನೆಸಿದೆ. ಕರ್ನಾಟಕದ ಒಳಗೆ ಬಾರದೆಯೇ ಊರಿಗೆ ಬ೦ದ೦ತಹ ಫೀಲ್ ದೊರಕಿಸಿ ಕೊಟ್ಟ ನನ್ನ ಮಿತ್ರದ್ವಯರಿಗೂ, ಅವರ ಕುಟು೦ಬದವರಿಗೂ, ಹಳ್ಳಿಯವರಿಗೂ ಮನಸ್ಸಲ್ಲೇ ನಮಿಸಿದೆ. ಜೀವನದಲ್ಲಿ ಮೊದಲಬಾರಿ ಹೋಗಿಬಂದ ಊರು ನನಗೆ ಸ್ವಂತ ಊರಿಗೆ ಹೋಗಿ ಬಂದ ಅನುಭವವನ್ನೇ ಕೊಟ್ಟಿದೆ.‌”ಇಲ್ಲಾ, ಊರಿಗೆ ಹೋಗಿಲ್ಲ, ಆದೋನಿಗೆ ಹೋಗಿದ್ದೆ ಅಷ್ಟೆ” ಎಂದು ಹೇಳಲು ಮನಸ್ಸಾಗಲಿಲ್ಲ. “ಜೀ” ಅಂತ ಹೇಳಿ ಒಬ್ಬಟ್ಟನ್ನು ಹಂಚಿದೆ.

Tuesday, 27 August 2019


Anoop Srinivas Bhat
Anoop Srinivas Bhat, lives in India (1987-present)
It would be quite silly to recommend just one movie from an entire industry that has been giving movies for over 80 years. But for the sake of the argument let us consider the following facts:
Given that it has to be recommended to every Indian (95% of Indians are non Kannadigas and Kannada movie industry has almost no audience outside their diaspora and borders) I am forced to consider the following broad parameters in choosing a movie
  1. It should probably show something unique/native to the land and its people.
  2. It should be culturally rich and showcase the way of life of the people in the state.
  3. The screenplay/direction/ cinematography should be of a very high caliber.
Now, there could be a number of movies that will fit all the 3 and most of those belong to the 'parallel cinema' genre in India, a euphemism for realistic and genuine stories and storytelling. Your regular Masala movie from the Kannada industry may not be very popular but the parallel cinema genre has many good movies over the years.
I'd like to name a few like Tabarana Kathe , Ghatashraddha, Dweepa, Nagamandala, Ondanondu Kaladalli, Kokila and so on. These movies are generally discussing grief/tragedy and taboo issues. Usually, the actors are from theatre background and are not the conventional box office hero.
But at this moment, I'd choose the movie “ Minchina Ota” (1979)
Minchina Ota is one of those rare heist movies from the time.
The storyline, narration, background score, music, direction all score very high even when compared to modern standards.
It's a story of two petty thieves ( a young man and a middle aged person) who feel that the society has wronged them and life hasn't given them a fair chance. They get on to stealing cars and when encountered with the 3rd protagonist by a matter of chance, convince him to become their accomplice and get on with the life of thievery. The protagonists are Anantanag and Shankar Nag, two real life brothers who went on to rule the Kannada movie industry in the 80s. Some scenes in the movie seem inspired by a few heist movies I've seen after that, mainly the heist scenes in the Asphalt Jungle (1950) and Rififi(1955) the gold standard in international cinema. The moment I watched those great scenes in Rififi and The Asphalt Jungle, I remembered the scenes of Minchina Ota.
The music and background score of the movie is quite different from the trend one saw in the movies of that era.
Priya Tendulkar as the girlfriend of one of the protagonists has a very good, albeit a brief role. She is a petty thief too. But when her paramour and the other two men are killed by the police in action, she promises the baby in her womb that she will not let him/her become a thief like herself. As in any movie of those days, the bad people (protagonists, here) do perish in the hands of the police but that is the only bit of commanlity you will find with other movies of the time.
Minchina Ota is a landmark movie and is of cultural and aesthetic significance. Not many movies of that era, mainly of that genre can be called as such.

Saturday, 22 September 2018

ಹವಿಗನ್ನಡದಲ್ಲೊಂದು ಕಥೆ

ವಾಟ್ಸಾಪ್ ನಿನಗೆ ಹ್ಯಾಟ್ಸಾಫ್.


ಇವಕ್ಕೆ ಈಗ ಈಗ ಕೋಪ ಜಾಸ್ತಿ ಆಯಿದು. ಊರಿನ ವಿಷಯಂಗಳ ಎಲ್ಲ ತಲೆಗೆ ಹಚ್ಚಿಗೊಂಬದು, ಒಟ್ರಾಸಿ ಬೆಚ್ಚ ಮಾಡಿಗೊಂಬದು.

ಮಾಲಿಂಗಣ್ಣನ ಮನೇಲಿ ಕರವಾಗ ದನ ಮೆಟ್ಟಿ ಬಾಲ್ದಿಯ ಕೌಂಚಿ ಹಾಕಿದ್ದಕ್ಕೂ, ಸೇಸ ನಾಯ್ಕನ ಅಳಿಯ ಸಮಾ ಕುಡಿತ್ತನಡ ಹೇಳ್ತದಕ್ಕೂ, ಫಕ್ರು ಬ್ಯಾರಿಯ ಅಂಗಡಿಲಿ ಹೆಗ್ಗಣದ ಕಾಟ ಇಪ್ಪದರನ್ನೂ ತಲೆಗೆ ಹಚ್ಚಿಗೊಂಡು ಸರೀ ಉಣ್ಣದ್ದೆ ಕೂಬದು….

“ಇದಾ ಸುಮಂಗಲೇ ,ನೀ ಹೀಂಗೆ ಮಾಡ್ವದು ಎನಗೆ ಇಷ್ಟವೇ ಇಲ್ಲೆ  ” ಹೇಳಿ ಮೊನ್ನೆ ಬೈದಪ್ಪಗ ಎನಗೆ ರಜ್ಜ ಹೆದರಿಕೆ ಆಯಿದು.

ಎಂತದಕ್ಕೆ ಹೀಂಗೆ ಮಾಡ್ತವಪ್ಪಾ ಹೇಳಿ ತಲೆಗೆ ಕೈ ಮಡುಗಿ ಕೂದಿಪ್ಪಗ ಫ್ಲೇಷ್ ಆತು.


ದೀಪನ ಕೊಟ್ಟು ಐದು ವರ್ಷ ಆತು. ಅದರ ಗೆಂಡಂಗೆ ಬೆಂಗಳೂರಿಲೇ ಉದ್ಯೋಗ. ಅದರ ಅತ್ಯೋರೂ, ಮಾವನೋರುದೆ ಊರಿಲಿಪ್ಪ ಜಾಗೆ ಮಾರಿ ಬೆಂಗಳೂರು ಸೇರಿದ್ದವು. ಒಳ್ಳೆ ಕೊಳಕ್ಕೆ ಗದ್ದೆಯೂ, ಹತ್ತೆಕ್ರೆ ಅಡಕ್ಕೆ ತೋಟವೂ ಇದ್ದತ್ತು. ಮಕ್ಕೊಗೆ ಊರು ಬೇಡಡ.

ಎಂತಾ ಅವಸ್ಥೆಯೋ!

ಇನ್ನು ದಿವ್ಯನುದೆ ಬೆಂಗಳೂರಿಲೇ ಇಪ್ಪದು ಈಗ. ಎರಡು ವರ್ಷದ ಹತ್ರ ಆತು ಕಂಪನಿ ಲಿ ಮಣ್ಣು ಹೊರ್ತದು.

ಏವ ಮಾಣಿಯ ತೋರಿಸಿರೂ ಬೇಡ ಬೇಡ ಹೇಳ್ತು.

ಮಹೇಶ ಈಗ ಫೈನಲ್ ಯರ್ ಲಿ ಇಪ್ಪದು.  ವಿಪ್ರೋ ಲಿ ಜೋಬು ನಿಗಂಟಾಯ್ದು.


ಮಕ್ಕೊ ಎಲ್ಲಾ ದೂರ ಹೋವ್ತವನ್ನೇ ಹೇಳಿ ಒಬ್ಬನೇ ಕೊರಗುತ್ತವು. “ಇದಾ, ಎಂತಾತು ಹೇಳೀಳಿ “ಹೇಳಿ ಬಡ್ಕೊಂಡರೂ ಎಂತೂ ಹೇಳ್ತವಿಲ್ಲೆ. ಆನು ಎಂತ ಮಾಡಿ ಸಾವದು ಗೊಂತಾವುತ್ತಿಲ್ಲೆ.


ಈ ದಿವ್ಯಂಗೂ, ಮಹೇಶಂಗೂ ಹೇಳಿರೆ ಭಾಷೆ ಇಲ್ಲೆ. ಎಷ್ಟು ಹೊತ್ತು ನೋಡಿರೂ ಫೋನಿಲಿ ಗುರುಟಿಯೋಂಡು ಇಪ್ಪದು.

ಮನೆಗೆ ಬಂದಿಪ್ಪಗ ಆದರೂ ಅದರ ಕರೇಲಿ ಮಡುಗಿ ಹೇಳಿರೆ ಇಲ್ಲೆ. ಆರತ್ರೆ ಮೆಸೇಜು, ಫೋನು ಹೇಳಿರೆ ಮಹೇಶನತ್ತರೆ, ದಿವ್ಯಕ್ಕನತ್ತರೆ ಹೇಳಿ ಹೇಳ್ತವು.

ಒಬ್ಬಂಗೊಬ್ಬನ ನೋಡಿದರೆ ಕಾದುವವಕ್ಕೆ ಫೋನಿಲಿ ಎಂತಪ್ಪಾ ಚೆಂಙಾಯಿ ಹೇಳಿ ಇವಕ್ಕೆ ಸಂಶಯ.


ಲವ್ವು ಮಣ್ಣ ಇದ್ದೋ ಹೇಳಿ ಹೆದರಿ ಹೆದರಿ ಬಿ ಪಿ, ಶುಗರ್ ಕಂಟ್ರೋಲ್ ಗೆ ಬತ್ತಿಲ್ಲೆ.

ಅಲ್ಲಾ, ದಿವ್ಯ ಆ ಕಲ್ಲುರಾಯರ ಮಗಳಿಂಗೆ ಕೊಟ್ಟ ನಿನ್ನ ನೋಟ್ ಪುಸ್ತಕ ತಾ, ತಮ್ಮಂಗಾತು ಹೇಳಿರೆ, ತತ್ತಿಲ್ಲೆ. ಹೆಳೆ ಹೇಳ್ತು಼. ಈ ಆಸಾಮಿಯತ್ರೆ ಅಕ್ಕನ ಪುತ್ತೂರಿಂಗೆ ಕರಕ್ಕೋಂಡು ಹೋಗಿ ಬಾ ಹೇಳಿರೆ ಕೇಳ, ಇವ್ವು ಇಡೀ ದಿನ ಅತ್ಲಾಗಿತ್ಲಾಗಿ ಮೆಸೇಜ್ ಮಾಡುವುದು ಅಪ್ಪೋ ಹೇಳಿ ಎನ್ನತ್ರೆ ಕೇಳಿ ಎನ್ನ ತಲೆಯೂ ಹಾಳು ಮಾಡಿದವು.

ಇನ್ನೊಂದರಿ ಬಂದಿಪ್ಪಗ ಇವರ ಇಬ್ರ ಫೋನಿನ ಬಲುಗಿ ತೋಡಿಂಗೆ ಇಡುಕ್ಕುತ್ತೆ ಹೇಳಿ ಇವ್ವು ಮೊನ್ನೆ ಚೌತಿ ಸಮಯಲ್ಲಿ ಕಿರುಚಾಡಿದವು.

ನಮ್ಮ ದಿವ್ಯಂಗೆ ಕಡೆಂಗೋಡ್ಲು ಶಂಕರಣ್ಣ ನ ಮಗ ಅನೀಶನ ಮೇಲೆ ಮನಸ್ಸಾಯಿದಡ‌. ಮಾಣಿ ಭಾರೀ ಉಶಾರಿದ್ದ, ಇದರ ಮೇನೇಜರಡ.

ಈ ವಾಟ್ಸಾಪ್ ಎನ್ನ ಹಳ್ಳ ತೋಡಿತ್ತು ಹೇಳಿ ಎಂತೆಂತೆಲ್ಲಾ ಬೇಡದ್ದು ಹೇಳಿಗೊಂಡು ತಲೆ ಚಚ್ಚಲೆ ಇವ್ವು ಹೆರಟವು. ಆನು ಕೈಲಿದ್ದ ತಂಬ್ಳಿ ಪಾತ್ರ ಕೆಳ ಹಾಕಿ, ಇವರತ್ರೆ ಓಡಿ ಸಮಾಧಾನ ಮಾಡಿದೆ.

ಮಾಣಿಗೆ ಒಂದೂವರೆ ಲಕ್ಷ ಸಂಬಳ ಇದ್ದು, ಬೆಂಗಳೂರಿನ ಬೆಳಿಗೆದ್ದೆಲಿ ಸ್ವಂತ ಫ್ಲೇಟು ಇದ್ದಡ, ಊರಿಲಿ ೫೦ಖಂಡಿಯ ತೋಟ ಇವನ ಪಾಲಿಂಗೆ ಬತ್ತಡ ಹೇಳಿ ಎಲ್ಲಾ ಹೇಳಿಯಪ್ಪಗ ರಜ್ಜ ಸಮಾಧಾನ ಆತು ಇವಕ್ಕೆ.

ನಾವು ಜಾತಕ ಹೊಂದುತ್ತೋ ಹೇಳಿ ಹೆರಡುತ್ತಿದ್ದರೆ ಈ ಶಂಕರಣ್ಣನವು ಮೂಸಿಯೂ ನೋಡುತ್ತಿತ್ತವಿಲ್ಲೆ , ಈಗ ಅವ್ವೇ ಕೂಸು ಕೊಡ್ತೀರಾ ಹೇಳಿ ಕೇಳಿದ್ದರಲ್ಲಿ ಇವಕ್ಕೆ ಭಯಂಕರ ಕೊಶಿ ಆತು.


ದಿವ್ಯ ನ ಹತ್ತರೆ ದಿನುಗೊಳಿ ತಪ್ಪಾತು ಕೈ ನೆಗ್ಗಿದ್ದು ಹೇಳಿ ಕೊಂಡಾಟ ಮಾಡಿದವು. ಅಪ್ಪನ ಪುಸುಲಾಯಿಸಲೆ ಹೇಳಿ ಅದು ತೆಕ್ಕೊಂಡು ಬಂದ ೧೦,೦೦೦ದ  ಫೋನಿಂಗೆ ಇವರ ಹಳೆ ಸಿಮ್ಮಿನ ಅಡಕತ್ತರಿಲಿ ತುಂಡು ಮಾಡ್ಸಿ ಹಾಕಿದವು.


ವಾಟ್ಸಾಪ್ ಲಿ ನಮ್ಮ ಪೈಕಿ ಯ ಗುಂಪಿಲಿ ಈ ಮಕ್ಕೊ ಅಂಬಗಂಬಗ ಎಂತಾರು ಚೆರೆಪೆರೆ ಮಾಡಿ ಉಪದ್ರ ಆವುತ್ತು ಹೇಳಿ ಇವರ ವಾಟ್ಸಾಪ್ ಪುರಾಣ ಮತ್ತೆ ಶುರುವಾತು.

ಬಲುಗ್ಗಿ ಇಡ್ಕೆಕು ಹೇಳಿ ವಾರಕ್ಕೆ ನಾಕು ಸರ್ತಿ ಹೇಳ್ತವು.

ಹೀಂಗೆ ಇಪ್ಪಗ ನಮ್ಮ ದಿವ್ಯ ನ ಮದುವೆ ಬಗ್ಗೆ ಅಂತೆಕಂತೆಗೊ ಶುರುವಾತು.

ಪೈಕಿಯವಕ್ಕೆ ಹೇಳದ್ದೆ ಕಳಿಯ ಹೇಳುವಲ್ಲಿಗೆ ಎತ್ತಿತ್ತು಼.

ಇವಕ್ಕೆ ಎಂತ ಮಾಡುವದು ಹೇಳಿ ಮಂಡೆಬೆಚ್ಚ. ಅದು ಆರು ಜಾತಕ ಪೋಸ್ಟ್ ಮಾಡಿದ್ದು, ಕೂಸು ನೋಡಲೆ ಬಂದಿಪ್ಪಗ ಗೆಣಂಗಿನ ಪೋಡಿಯೋ, ದೀಗುಜ್ಜೆದೋ ಹೇಳಿ ಕೇಳುಗನ್ನೆಪ್ಪಾ ಹೇಳಿ ಪರಂಚಿದವು.


ಅಷ್ಟಪ್ಪಗ ಕುಂಯ್ಯ್ ಹೇಳಿ ವಾಟ್ಸಾಪ್ ಮೆಸೇಜು ಬಂದದು ನೋಡಿ ಒಂದು ತೆಲಿಕ್ಕೆ ಬಂತು.

ಹೀಂಗೆ ಹೀಂಗೆ ಹೇಳಿ ಅನೀಶನ ಬಗ್ಗೆ, ಶಂಕರಣ್ಣನವರ ಬಗ್ಗೆ ಮಹೇಶನತ್ತರೆ ಟೈಪು ಮಾಡಿಸಿ ಎಲ್ಲೋರಿಂಗೂ ಕಳುಸಿದವು.

ಅಜ್ಜನ ಮನೆ ಗುಂಪು, ಅಪ್ಪಚ್ಚಿ ಮಕ್ಕೊಗೆ, ಕಡೇಂಗೆ ಎನ್ನ ಮನೆಯವಕ್ಕೂ ಕಳುಹಿಸಿ , ಸಮಾಧಾನಲ್ಲಿ  ಎರಡು ಸೌಟು ಹೆಚ್ಚು ಅಶನವೂ.ಉಂಡು ಬಚ್ಚಿರೆ ಹಾಕಿದವು.

ಇದಾಗಿ ಎರಡು ತಿಂಗಳಿಂದ ಯಾವ ಬೆಚ್ಚವೂ ಇಲ್ಲೆ.

ತೋಟಕ್ಕೆ ಹೋಪಗಳೂ ವಾಟ್ಸಾಪ್ ಒತ್ತುತ್ತವು.

ಭಟ್ಟಕ್ಕೊಗೆ ಬಪ್ಪ ತಿಂಗಳ ಬದ್ಧದ ದಿನ ನೆಂಪುಸಿಯೋಂಡು,

ಈ ಅನೀಶ ಯಾವುದೋ ಪುರ್ಬುವಿನ ಹೆಸರಿನ ಅಂಗಡಿಲಿ

ಬಟ್ಟೆ ತೆಗೆದ ಫೊಟೋ, ದೀಪ ನ ೩ ವರ್ಷದ ಮಗಳ ಬಾತುಕೋಳಿ ಮೋರೆಯ ನೋಡಿಗೊಂಡು ಒಬ್ಬನೇ ನೆಗೆ ಮಾಡಿ ಕೂಬದು.

ಎಷ್ಟು ದನುಗೊಳಿರೂ ಕೇಳ. ಇನ್ನು ಮಂಟಪಲ್ಲಿ ಫೋನ್ ನೋಡಿ ಗೊಂಡು ಕೂರದ್ದರೆ ಸಾಕು. ಬಲುಗಿ ಇಡುಕುವ ಹೇಳಿ ಕಾಣ್ತು.

ಇವರೊಟ್ಟಿಂಗೆ ಸಾಕಾತಪ್ಪ…….

ಅನೂಪ°

ಭಾಷಾಂತರದ ಅವಾಂತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ಮಾತೃಭಾಷೆ ಹೊಂದಿರುವ ಜನರಿದ್ದಾರೆ. ಆ‌ ಭಾಷೆಗಳೂ ತೀವ್ರವಾಗಿ ಕನ್ನಡೀಕರಣಗೊಂಡು, ತಮ್ಮೊಳಗೆ ಹಲವು ಪ್ರಭೇದಗಳನ್ನು ಹೊಂದಿ, ಇಂದು ವಿನಾಶದ ಅಂಚಿನಲ್ಲಿವೆ.

ನಮ್ಮ ತಂದೆಯ ಮನೆಮಾತು ಮರಾಠಿ. ಹಾಗೆಂದು ನಮ್ಮಪ್ಪನೋ, ತಾತನೋ ಮಹಾರಾಷ್ಟ್ರ ದಿಂದ ಬಂದವರೇನಲ್ಲ. ಶಿವಾಜಿ ಮಹಾರಾಜರ ಕಾಲದಲ್ಲೋ ಅಥವಾ ಸಾಂಭಾಜಿಯ ಕಾಲದಲ್ಲೋ ಒಂದಷ್ಟು ಜನ ಈಗಿನ ಸಾತಾರಾ ಜಿಲ್ಲೆಯ ಕರಾಡದಿಂದ ದಕ್ಷಿಣ ಕನ್ನಡದ ಕಡೆಗೆ ವಲಸೆ ಬಂದಿರಬೇಕು ಎಂದು ನಮ್ಮಜ್ಜಿ ಹೇಳಿದ್ದಾರೆ ಎಂದು ನಮ್ಮಜ್ಜಿ ನನಗೆ ಹೇಳಿದ್ದಾರೆ.
ಈಗ ನಾನು ಹೇಳ ಹೊರಟಿರುವುದು, ನನ್ನದೇ ಮನೆಯಲ್ಲಿ ನಡೆದ ಕಥೆ. ಸುಮಾರು ೭೦ರ ದಶಕದ ಕಥೆ.
ನಮ್ಮ ಮನೆಯಿಂದ ಸುಮಾರು ೧೦ಕಿ.ಮೀ. ನಡೆದ ಮೇಲೆ ತಾಲೂಕು ಕೇಂದ್ರಕ್ಕೆ ದಿನಕ್ಕೆ ಎರಡು ಬಾರಿ ಬಸ್ ಸಿಗುತ್ತಿತ್ತು. ಪಿಯು, ಡಿಗ್ರಿ ಓದುವ ಮನೆ ಮಕ್ಕಳಿಗಾಗಿ ಪೇಟೆಯಲ್ಲಿ ಚಿಕ್ಕದೊಂದು ಬಿಡಾರವೂ ಇತ್ತು. ಹೈಸ್ಕೂಲು ವರೆಗಿನ ಮಕ್ಕಳು ಮನೆಯಲ್ಲೇ ಉಳಿದು, ತೋಟದ ಕೆಲಸ ಮಾಡಿಕೊಂಡು ಹಳ್ಳಿಯ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು.
ನನ್ನ ತಂದೆಯ ಸೋದರತ್ತೆಯವರು ನಮಗಿಂತ ದೂರದ, ಹೊಳೆಯಾಚೆಗೆ ಇದ್ದು ಊರಿನಲ್ಲಿದ್ದ ಕಾರಣ ಅವರು ಮಕ್ಕಳೆಲ್ಲ ನಮ್ಮಲ್ಲೇ ಇದ್ದು ಶಾಲೆಗೆ ಹೋದವರು.

ಅತ್ತೆಯ ಕೊನೆಯ ಮಗ, ಕುಟುಂಬದ ಈವರೆಗಿನ ಎಲ್ಲಾ 15-20 ಮಕ್ಕಳಲ್ಲಿ ಅತಿ ಜೋರು.
ಎಲ್ಲರಿಗೂ ಬಿಟ್ಟಿ ಚಾಕರಿ ಗೆ ಪಾಪ, ಇವನೇ ಬೇಕು.
ಒಂದು ಬಾರಿ ಅಪರೂಪಕ್ಕೆ ಮಾಡಿದ ಸ್ವೀಟೂ ಸಿಗಲಿಲ್ಲವಂತೆ. ಜ್ವರ ಬಂದ ಕಾರಣ ಮಾಡಿದ ದಿನ ಕೊಡಲಿಲ್ಲ; ವಾಸಿಯಾದಾಗ ಪಾಪ ತಿಂಡಿ ಉಳಿದಿರಲಿಲ್ಲ. ಕೊಡದಿದ್ದರೆ ಶಾಲೆಗೆ ಹೋಗಲಾರೆ ಎಂದು ರಂಪ ಮಾಡಿದಾಗ ದೊಡ್ಡ ಮಾವ (ನನ್ನಜ್ಜ) ಎರಡೇಟು ಬಿಗಿದರು.

೧೦ ವರ್ಷ ವಯಸ್ಸಿನ ನಮ್ಮ ಚೇತು ಕೋಪಗೊಂಡು ಅಣ್ಣ ಅಕ್ಕಂದಿರೊಂದಿಗೆ ಶಾಲೆಗೆ ಜೊತೆಯಾಗಿ ಹೋಗಲಿಲ್ಲ.
೨ನೇ ದಿನ, ಒಬ್ಬನೇ ಶಾಲೆಗೆ ತೋಟದ ದಾರಿಯಾಗಿ ಹೋಗುತ್ತಿದ್ದಾಗ, ಚೀಲವೊಂದರಲ್ಲಿ ೪-೫ ತೆಂಗಿನ ಕಾಯಿ ಸಿಕ್ಕವು. ಹಿಂದಿನ ದಿನ ತೋಟದ ಆಳು ಮಹಾಲಿಂಗ ಮರೆತು ಅಲ್ಲೇ ಬಿಟ್ಟು ಹೋದಂತಿತ್ತು.

ಶಿವರಾಮನ ಅಂಗಡಿಯ ಕೊಬ್ಬರಿ ಮಿಠಾಯಿ ತಿಂದು ಸೇಡು ತೀರಿಸಲು ಅಣ್ಣಾವ್ರು ತೆಂಗಿನ ಕಾಯಿ ಹೊತ್ತು ಮುಂದೆ ಹೋದರು!

ಆಗಿನ ಕಾಲದಲ್ಲಿ ನಮ್ಮ ಅಜ್ಜ ವರ್ಷಕ್ಕೊಮ್ಮೆ ಲಾರಿಯಲ್ಲಿ ಅಡಿಕೆಯನ್ನು ಮಂಗಳೂರಿನ ಮಾರುಕಟ್ಟೆ ಯಲ್ಲಿ ಮಾರಿ, ಮನೆಯ ೨೫-೩೦ ಮಂದಿಗೆ ವರ್ಷವಿಡೀ ಬೇಕಾಗುವ ಅಕ್ಕಿ, ಬೇಳೆ, ಮೆಣಸು ಇತ್ಯಾದಿ ತೆಗೆದು ಕೊಂಡು ಬರುತ್ತಿದ್ದರು.
ಒಂದುವರೆ ಟನ್ ಅಕ್ಕಿ, ೨ ಕ್ವಿಂಟಾಲ್ ಬೇಳೆ, ೨೫ ಕಿಲೋ ಚಹಾ ಪುಡಿ ತರುವ ಮನೆಯ ಹುಡುಗ, ೪-೫ ತೆಂಗಿನ ಕಾಯಿ ಮಾರಿ, ೧೦೦ ಗ್ರಾಂ ಚಹಾ ಪುಡಿ ಹಾಗೂ ಉಳಿದ ಹಣದಲ್ಲಿ ಕೊಬ್ಬರಿ ಮಿಠಾಯಿ ಕೇಳಿದಾಗ ಅಂಗಡಿಯವನಿಗೆ ಸಂದೇಹ.
ಯಾವಾಗಲೂ ಮಾತನಾಡುವ ಹುಡುಗ ಇಂದು ಸ್ವಲ್ಪವೇ ಬಾಯಿ ತೆರೆಯುತ್ತಿದ್ದಾನೆ…..

ಹೀಗೆ ಮಿಠಾಯಿ ತಿಂದು, ಶಾಲೆಗೆ ಹೋಗಿ, ಕೊನೆಗೆ ರಾತ್ರಿ ಊರಲ್ಲಿ ನಡೆದ ಯಕ್ಷಗಾನ ಬಯಲಾಟ ನೋಡಲು ಹೋದ.
ನಮ್ಮ ಮನೆಯಿಂದ ಕೆಲವರು ಅಲ್ಲಿದ್ದರು. ಬೆಳಗಾಗುತ್ತಿದ್ದಂತೆ ಈ ಪುಣ್ಯಾತ್ಮ ಬಯಲಾಟದವರ ಲಾರಿಯನ್ನೇರಿ ಪುತ್ತೂರು ತಲುಪಿದ.

ಪುತ್ತೂರು ನಗರದಲ್ಲಿ ನಮ್ಮ ದೊಂದು ಸಣ್ಣ ಬಿಡಾರವೊಂದಿತ್ತು ಎಂದು ಹೇಳಿದ್ದನಲ್ಲಾ? ಅಲ್ಲಿ ಕಾಲೇಜು ಹೋಗುತ್ತಿರುವ ಮನೆ ಮಕ್ಕಳೂ, ಹೆಚ್ಚಾಗಿ ಉಷಾರಿಲ್ಲದ ನಮ್ಮ ಅಜ್ಜಿಯೂ ಇರುತ್ತಿದ್ದರು.

ಪಕ್ಕದ ಮನೆಯ ಹುಡುಗನೊಬ್ಬ ಬಂದು ನನ್ನ ಚಿಕ್ಕಪ್ಪ ನಲ್ಲಿ ಬಂದು..” ಏ ಶ್ರೀಧರಾ, ಆ ಗುಂಗುರು ಕೂದಲಿನ ಚೇತನ ನಿನ್ನ ತಮ್ಮ ಅಲ್ಲವಾ, ಅವನು ನಿಮ್ಮ ಊರಿಗೆ ಹೋಗುವ ಶಂಕರ್ ವಿಠಲ ಬಸ್ಸಿನ ಹಿಂಬದಿ ಕೇರಿಯರ್ನಲ್ಲಿ ನೇತಾಡಿಕೊಂಡು ಹೋಗ್ತಾ ಇದ್ದ …..”

“ಸಾಧ್ಯವೇ ಇಲ್ಲ” , ಅಂತ ನನ್ನ ಚಿಕ್ಕಪ್ಪನ ವಾದ.
“ನೀನು ಶ್ರೀಧರನ ತಮ್ಮ ಅಲ್ಲವಾ ಎಂದು ಕೇಳಿದರೆ ಅಲ್ಲ ಎಂದ… ಸರೋಜಿನಿಯ ತಮ್ಮ ನೇ ಅಂತ ಕೇಳಿದಾಗ.. ಸರೋಜನೂ ಗೊತ್ತಿಲ್ಲ, ಅವಳ ಅಪ್ಪನೂ ಗೊತ್ತಿಲ್ಲ ಅಂತ ಹೇಳಿದ ಮಾರಾಯಾ .. ಅಂತ ಆ ವ್ಯಕ್ತಿ ಹೇಳಿದಾಗ ಇರಬಹುದೇನೊ ಎಂಬ ಸಣ್ಣ ಸಂಶಯ ಉಂಟಾಯಿತು.
ಮನೆ ಯಲ್ಲಿ ಹೇಳಿ ಎಲ್ಲರಿಗೂ ಚಿಂತೆ ಮಾಡುವುದು ಬೇಡ ಎಂದು ಚಿಕ್ಕಪ್ಪ ಯಾರಲ್ಲೂ ಏನೂ ಹೇಳಲಿಲ್ಲ.
ಹೇಗೂ ಸಿಕ್ಕಿರುವ ಮಾಹಿತಿ ಪೂರ್ತಿಯಾಗಿ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆ ವ್ಯಕ್ತಿ ಚೇತನನನ್ನು ಹೆಚ್ಚು ಎಂದರೆ, ಒಂದೆರಡು ಬಾರಿ ನೋಡಿದ್ದಿರಬಹುದು…
ಪ್ರತಿ ಸ್ಟಾಪಿನಲ್ಲಿ ಬಸ್ಸಿನ ಹಿಂಬದಿಯ ಏಣಿಯಿಂದ ಇಳಿದು, ಬಸ್ ಸ್ಟಾರ್ಟ್ ಆದಾಗ ಮತ್ತೆ ಓಡಿ ಏಣಿ ಹತ್ತಿ, ಕೊನೆಗೂ
ಸ್ಟಾಪಿನಲ್ಲಿ ಇಳಿದ.

ಇನ್ನೂ ಮನೆಗೆ ಹೋಗಲು ೬-೭ಮೈಲು ನಡೆಯಬೇಕಲ್ಲ?

ಒಂದೆಡೆ ಹಸಿವು, ಒಂದೆಡೆ ದಣಿವು..
ಅಲ್ಲೇ ಹೊಸದಾಗಿ ಶುರುವಾಗಿದ್ದ ಹೋಟೆಲ್ ನಲ್ಲಿ ನಿಂತು, ಬೆಳಿಗ್ಗೆ ಉಳಿದಿದ್ದ ತಿಂಡಿ ತಿಂದ.
ಅಲ್ಲೇ ಇದ್ದ ಕಬ್ಬಿನ ಹಾಲು ಕೂಡ ಬೇಕೆಂದು ತೋರಿತು.
“ನನಗೆ ಆ ಊಸಿನ ರಸ ಬೇಕು” ಎಂದು ಹೇಳಿದ ತಕ್ಷಣ ಹಲವರು ಗೊಳ್ಳೆಂದು ನಕ್ಕರು.(ಮರಾಠಿ ಭಾಷೆಯಲ್ಲಿ ಕಬ್ಬು =ಊಸ್ (ऊस) )
ನೆರೆದವರೆಲ್ಲರಿಗೂ ೨ ನಿಮಿಷದಲ್ಲೇ ಈ ಹೂಸಿನ ರಸದ ಕಥೆಯ ಕಂಪು ಹರಡಿತು.
ಇವ ಯಾರು? ಯಾವ ಭಟ್ರ ಮಗ ಎಂದು ಜನ ವಿಶ್ಲೇಷಣೆ ಮಾಡುವ ವೇಳೆಯಲ್ಲಿ ಸೈಲೆಂಟಾಗಿ ಎಸ್ಕೇಪಾಗಿ ಮನೆಗೆ ಹೋದನಂತೆ!
ದೊಡ್ಡ ಮಾವ ಬೆತ್ತ ಹಿಡಿದು ಕಾಯುತ್ತಾ ನಿಂತಿದ್ದಾರೆ ಎಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಾಲಿಂಗ ಹೇಳಿದ.

ಹೋಗುವಾಗ ಇದ್ದಷ್ಟು ಕೂಡ ಮಾನ ಈಗ ಉಳಿದಿರಲಿಲ್ಲ.

ಬಾಯಿಯಿಂದ ಬಾಯಿಗೆ ವಿಷಯ ತಿಳಿದು ಕೊನೆಗೆ ಆ ಹೂಸಿನ ರಸದ ಕಥೆ ಕೇಳದವ ಹತ್ತೂರಲ್ಲೂ ಇರಲಿಲ್ಲ.

ಕಳೆದ ವರ್ಷ ಊರಿಗೆ ಬಂದಿದ್ದ ಚೇತನ್ ಮಾವನನ್ನು ನನ್ನ ಚಿಕ್ಕಪ್ಪ : ऊसाचे रस पाहिजे का? ಎಂದು ಮತ್ತೆ ಮತ್ತೆ ಕೇಳಿದಾಗ ನಾವೂ ಜೊತೆಯಲ್ಲಿ ಇದ್ದೆವು. ಮುಸಿ ಮುಸಿ ಇದ್ದ ಕಥೆ ಮರುದಿನ ಹೇಳಿದಾಗ ನಾವು ಮಕ್ಕಳು ಕೇಳಿ, ನಕ್ಕು  ಸುಸ್ತೋ ಸುಸ್ತು.