Saturday, 22 September 2018

ಭಾಷಾಂತರದ ಅವಾಂತರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ಮಾತೃಭಾಷೆ ಹೊಂದಿರುವ ಜನರಿದ್ದಾರೆ. ಆ‌ ಭಾಷೆಗಳೂ ತೀವ್ರವಾಗಿ ಕನ್ನಡೀಕರಣಗೊಂಡು, ತಮ್ಮೊಳಗೆ ಹಲವು ಪ್ರಭೇದಗಳನ್ನು ಹೊಂದಿ, ಇಂದು ವಿನಾಶದ ಅಂಚಿನಲ್ಲಿವೆ.

ನಮ್ಮ ತಂದೆಯ ಮನೆಮಾತು ಮರಾಠಿ. ಹಾಗೆಂದು ನಮ್ಮಪ್ಪನೋ, ತಾತನೋ ಮಹಾರಾಷ್ಟ್ರ ದಿಂದ ಬಂದವರೇನಲ್ಲ. ಶಿವಾಜಿ ಮಹಾರಾಜರ ಕಾಲದಲ್ಲೋ ಅಥವಾ ಸಾಂಭಾಜಿಯ ಕಾಲದಲ್ಲೋ ಒಂದಷ್ಟು ಜನ ಈಗಿನ ಸಾತಾರಾ ಜಿಲ್ಲೆಯ ಕರಾಡದಿಂದ ದಕ್ಷಿಣ ಕನ್ನಡದ ಕಡೆಗೆ ವಲಸೆ ಬಂದಿರಬೇಕು ಎಂದು ನಮ್ಮಜ್ಜಿ ಹೇಳಿದ್ದಾರೆ ಎಂದು ನಮ್ಮಜ್ಜಿ ನನಗೆ ಹೇಳಿದ್ದಾರೆ.
ಈಗ ನಾನು ಹೇಳ ಹೊರಟಿರುವುದು, ನನ್ನದೇ ಮನೆಯಲ್ಲಿ ನಡೆದ ಕಥೆ. ಸುಮಾರು ೭೦ರ ದಶಕದ ಕಥೆ.
ನಮ್ಮ ಮನೆಯಿಂದ ಸುಮಾರು ೧೦ಕಿ.ಮೀ. ನಡೆದ ಮೇಲೆ ತಾಲೂಕು ಕೇಂದ್ರಕ್ಕೆ ದಿನಕ್ಕೆ ಎರಡು ಬಾರಿ ಬಸ್ ಸಿಗುತ್ತಿತ್ತು. ಪಿಯು, ಡಿಗ್ರಿ ಓದುವ ಮನೆ ಮಕ್ಕಳಿಗಾಗಿ ಪೇಟೆಯಲ್ಲಿ ಚಿಕ್ಕದೊಂದು ಬಿಡಾರವೂ ಇತ್ತು. ಹೈಸ್ಕೂಲು ವರೆಗಿನ ಮಕ್ಕಳು ಮನೆಯಲ್ಲೇ ಉಳಿದು, ತೋಟದ ಕೆಲಸ ಮಾಡಿಕೊಂಡು ಹಳ್ಳಿಯ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು.
ನನ್ನ ತಂದೆಯ ಸೋದರತ್ತೆಯವರು ನಮಗಿಂತ ದೂರದ, ಹೊಳೆಯಾಚೆಗೆ ಇದ್ದು ಊರಿನಲ್ಲಿದ್ದ ಕಾರಣ ಅವರು ಮಕ್ಕಳೆಲ್ಲ ನಮ್ಮಲ್ಲೇ ಇದ್ದು ಶಾಲೆಗೆ ಹೋದವರು.

ಅತ್ತೆಯ ಕೊನೆಯ ಮಗ, ಕುಟುಂಬದ ಈವರೆಗಿನ ಎಲ್ಲಾ 15-20 ಮಕ್ಕಳಲ್ಲಿ ಅತಿ ಜೋರು.
ಎಲ್ಲರಿಗೂ ಬಿಟ್ಟಿ ಚಾಕರಿ ಗೆ ಪಾಪ, ಇವನೇ ಬೇಕು.
ಒಂದು ಬಾರಿ ಅಪರೂಪಕ್ಕೆ ಮಾಡಿದ ಸ್ವೀಟೂ ಸಿಗಲಿಲ್ಲವಂತೆ. ಜ್ವರ ಬಂದ ಕಾರಣ ಮಾಡಿದ ದಿನ ಕೊಡಲಿಲ್ಲ; ವಾಸಿಯಾದಾಗ ಪಾಪ ತಿಂಡಿ ಉಳಿದಿರಲಿಲ್ಲ. ಕೊಡದಿದ್ದರೆ ಶಾಲೆಗೆ ಹೋಗಲಾರೆ ಎಂದು ರಂಪ ಮಾಡಿದಾಗ ದೊಡ್ಡ ಮಾವ (ನನ್ನಜ್ಜ) ಎರಡೇಟು ಬಿಗಿದರು.

೧೦ ವರ್ಷ ವಯಸ್ಸಿನ ನಮ್ಮ ಚೇತು ಕೋಪಗೊಂಡು ಅಣ್ಣ ಅಕ್ಕಂದಿರೊಂದಿಗೆ ಶಾಲೆಗೆ ಜೊತೆಯಾಗಿ ಹೋಗಲಿಲ್ಲ.
೨ನೇ ದಿನ, ಒಬ್ಬನೇ ಶಾಲೆಗೆ ತೋಟದ ದಾರಿಯಾಗಿ ಹೋಗುತ್ತಿದ್ದಾಗ, ಚೀಲವೊಂದರಲ್ಲಿ ೪-೫ ತೆಂಗಿನ ಕಾಯಿ ಸಿಕ್ಕವು. ಹಿಂದಿನ ದಿನ ತೋಟದ ಆಳು ಮಹಾಲಿಂಗ ಮರೆತು ಅಲ್ಲೇ ಬಿಟ್ಟು ಹೋದಂತಿತ್ತು.

ಶಿವರಾಮನ ಅಂಗಡಿಯ ಕೊಬ್ಬರಿ ಮಿಠಾಯಿ ತಿಂದು ಸೇಡು ತೀರಿಸಲು ಅಣ್ಣಾವ್ರು ತೆಂಗಿನ ಕಾಯಿ ಹೊತ್ತು ಮುಂದೆ ಹೋದರು!

ಆಗಿನ ಕಾಲದಲ್ಲಿ ನಮ್ಮ ಅಜ್ಜ ವರ್ಷಕ್ಕೊಮ್ಮೆ ಲಾರಿಯಲ್ಲಿ ಅಡಿಕೆಯನ್ನು ಮಂಗಳೂರಿನ ಮಾರುಕಟ್ಟೆ ಯಲ್ಲಿ ಮಾರಿ, ಮನೆಯ ೨೫-೩೦ ಮಂದಿಗೆ ವರ್ಷವಿಡೀ ಬೇಕಾಗುವ ಅಕ್ಕಿ, ಬೇಳೆ, ಮೆಣಸು ಇತ್ಯಾದಿ ತೆಗೆದು ಕೊಂಡು ಬರುತ್ತಿದ್ದರು.
ಒಂದುವರೆ ಟನ್ ಅಕ್ಕಿ, ೨ ಕ್ವಿಂಟಾಲ್ ಬೇಳೆ, ೨೫ ಕಿಲೋ ಚಹಾ ಪುಡಿ ತರುವ ಮನೆಯ ಹುಡುಗ, ೪-೫ ತೆಂಗಿನ ಕಾಯಿ ಮಾರಿ, ೧೦೦ ಗ್ರಾಂ ಚಹಾ ಪುಡಿ ಹಾಗೂ ಉಳಿದ ಹಣದಲ್ಲಿ ಕೊಬ್ಬರಿ ಮಿಠಾಯಿ ಕೇಳಿದಾಗ ಅಂಗಡಿಯವನಿಗೆ ಸಂದೇಹ.
ಯಾವಾಗಲೂ ಮಾತನಾಡುವ ಹುಡುಗ ಇಂದು ಸ್ವಲ್ಪವೇ ಬಾಯಿ ತೆರೆಯುತ್ತಿದ್ದಾನೆ…..

ಹೀಗೆ ಮಿಠಾಯಿ ತಿಂದು, ಶಾಲೆಗೆ ಹೋಗಿ, ಕೊನೆಗೆ ರಾತ್ರಿ ಊರಲ್ಲಿ ನಡೆದ ಯಕ್ಷಗಾನ ಬಯಲಾಟ ನೋಡಲು ಹೋದ.
ನಮ್ಮ ಮನೆಯಿಂದ ಕೆಲವರು ಅಲ್ಲಿದ್ದರು. ಬೆಳಗಾಗುತ್ತಿದ್ದಂತೆ ಈ ಪುಣ್ಯಾತ್ಮ ಬಯಲಾಟದವರ ಲಾರಿಯನ್ನೇರಿ ಪುತ್ತೂರು ತಲುಪಿದ.

ಪುತ್ತೂರು ನಗರದಲ್ಲಿ ನಮ್ಮ ದೊಂದು ಸಣ್ಣ ಬಿಡಾರವೊಂದಿತ್ತು ಎಂದು ಹೇಳಿದ್ದನಲ್ಲಾ? ಅಲ್ಲಿ ಕಾಲೇಜು ಹೋಗುತ್ತಿರುವ ಮನೆ ಮಕ್ಕಳೂ, ಹೆಚ್ಚಾಗಿ ಉಷಾರಿಲ್ಲದ ನಮ್ಮ ಅಜ್ಜಿಯೂ ಇರುತ್ತಿದ್ದರು.

ಪಕ್ಕದ ಮನೆಯ ಹುಡುಗನೊಬ್ಬ ಬಂದು ನನ್ನ ಚಿಕ್ಕಪ್ಪ ನಲ್ಲಿ ಬಂದು..” ಏ ಶ್ರೀಧರಾ, ಆ ಗುಂಗುರು ಕೂದಲಿನ ಚೇತನ ನಿನ್ನ ತಮ್ಮ ಅಲ್ಲವಾ, ಅವನು ನಿಮ್ಮ ಊರಿಗೆ ಹೋಗುವ ಶಂಕರ್ ವಿಠಲ ಬಸ್ಸಿನ ಹಿಂಬದಿ ಕೇರಿಯರ್ನಲ್ಲಿ ನೇತಾಡಿಕೊಂಡು ಹೋಗ್ತಾ ಇದ್ದ …..”

“ಸಾಧ್ಯವೇ ಇಲ್ಲ” , ಅಂತ ನನ್ನ ಚಿಕ್ಕಪ್ಪನ ವಾದ.
“ನೀನು ಶ್ರೀಧರನ ತಮ್ಮ ಅಲ್ಲವಾ ಎಂದು ಕೇಳಿದರೆ ಅಲ್ಲ ಎಂದ… ಸರೋಜಿನಿಯ ತಮ್ಮ ನೇ ಅಂತ ಕೇಳಿದಾಗ.. ಸರೋಜನೂ ಗೊತ್ತಿಲ್ಲ, ಅವಳ ಅಪ್ಪನೂ ಗೊತ್ತಿಲ್ಲ ಅಂತ ಹೇಳಿದ ಮಾರಾಯಾ .. ಅಂತ ಆ ವ್ಯಕ್ತಿ ಹೇಳಿದಾಗ ಇರಬಹುದೇನೊ ಎಂಬ ಸಣ್ಣ ಸಂಶಯ ಉಂಟಾಯಿತು.
ಮನೆ ಯಲ್ಲಿ ಹೇಳಿ ಎಲ್ಲರಿಗೂ ಚಿಂತೆ ಮಾಡುವುದು ಬೇಡ ಎಂದು ಚಿಕ್ಕಪ್ಪ ಯಾರಲ್ಲೂ ಏನೂ ಹೇಳಲಿಲ್ಲ.
ಹೇಗೂ ಸಿಕ್ಕಿರುವ ಮಾಹಿತಿ ಪೂರ್ತಿಯಾಗಿ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆ ವ್ಯಕ್ತಿ ಚೇತನನನ್ನು ಹೆಚ್ಚು ಎಂದರೆ, ಒಂದೆರಡು ಬಾರಿ ನೋಡಿದ್ದಿರಬಹುದು…
ಪ್ರತಿ ಸ್ಟಾಪಿನಲ್ಲಿ ಬಸ್ಸಿನ ಹಿಂಬದಿಯ ಏಣಿಯಿಂದ ಇಳಿದು, ಬಸ್ ಸ್ಟಾರ್ಟ್ ಆದಾಗ ಮತ್ತೆ ಓಡಿ ಏಣಿ ಹತ್ತಿ, ಕೊನೆಗೂ
ಸ್ಟಾಪಿನಲ್ಲಿ ಇಳಿದ.

ಇನ್ನೂ ಮನೆಗೆ ಹೋಗಲು ೬-೭ಮೈಲು ನಡೆಯಬೇಕಲ್ಲ?

ಒಂದೆಡೆ ಹಸಿವು, ಒಂದೆಡೆ ದಣಿವು..
ಅಲ್ಲೇ ಹೊಸದಾಗಿ ಶುರುವಾಗಿದ್ದ ಹೋಟೆಲ್ ನಲ್ಲಿ ನಿಂತು, ಬೆಳಿಗ್ಗೆ ಉಳಿದಿದ್ದ ತಿಂಡಿ ತಿಂದ.
ಅಲ್ಲೇ ಇದ್ದ ಕಬ್ಬಿನ ಹಾಲು ಕೂಡ ಬೇಕೆಂದು ತೋರಿತು.
“ನನಗೆ ಆ ಊಸಿನ ರಸ ಬೇಕು” ಎಂದು ಹೇಳಿದ ತಕ್ಷಣ ಹಲವರು ಗೊಳ್ಳೆಂದು ನಕ್ಕರು.(ಮರಾಠಿ ಭಾಷೆಯಲ್ಲಿ ಕಬ್ಬು =ಊಸ್ (ऊस) )
ನೆರೆದವರೆಲ್ಲರಿಗೂ ೨ ನಿಮಿಷದಲ್ಲೇ ಈ ಹೂಸಿನ ರಸದ ಕಥೆಯ ಕಂಪು ಹರಡಿತು.
ಇವ ಯಾರು? ಯಾವ ಭಟ್ರ ಮಗ ಎಂದು ಜನ ವಿಶ್ಲೇಷಣೆ ಮಾಡುವ ವೇಳೆಯಲ್ಲಿ ಸೈಲೆಂಟಾಗಿ ಎಸ್ಕೇಪಾಗಿ ಮನೆಗೆ ಹೋದನಂತೆ!
ದೊಡ್ಡ ಮಾವ ಬೆತ್ತ ಹಿಡಿದು ಕಾಯುತ್ತಾ ನಿಂತಿದ್ದಾರೆ ಎಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಾಲಿಂಗ ಹೇಳಿದ.

ಹೋಗುವಾಗ ಇದ್ದಷ್ಟು ಕೂಡ ಮಾನ ಈಗ ಉಳಿದಿರಲಿಲ್ಲ.

ಬಾಯಿಯಿಂದ ಬಾಯಿಗೆ ವಿಷಯ ತಿಳಿದು ಕೊನೆಗೆ ಆ ಹೂಸಿನ ರಸದ ಕಥೆ ಕೇಳದವ ಹತ್ತೂರಲ್ಲೂ ಇರಲಿಲ್ಲ.

ಕಳೆದ ವರ್ಷ ಊರಿಗೆ ಬಂದಿದ್ದ ಚೇತನ್ ಮಾವನನ್ನು ನನ್ನ ಚಿಕ್ಕಪ್ಪ : ऊसाचे रस पाहिजे का? ಎಂದು ಮತ್ತೆ ಮತ್ತೆ ಕೇಳಿದಾಗ ನಾವೂ ಜೊತೆಯಲ್ಲಿ ಇದ್ದೆವು. ಮುಸಿ ಮುಸಿ ಇದ್ದ ಕಥೆ ಮರುದಿನ ಹೇಳಿದಾಗ ನಾವು ಮಕ್ಕಳು ಕೇಳಿ, ನಕ್ಕು  ಸುಸ್ತೋ ಸುಸ್ತು.

2 comments:

  1. The Difference Between SEM and SEO
    SEO (search engine optimization) and SEM (search engine marketing) are similar terms, but they are not interchangeable.
    There are several tactics that can help your website rank well in organic search engine results using SEO (search engine optimization). SEM (search engine marketing) is another effective tactic for Internet businesses, and it includes things like search engine optimization, paid listings, and other SEO services.

    Google My Business Image Sizes and Optimization
    The images you upload for your Google My Business profile should be of professional quality and conform to Google My Business image standards if you want your profile to be optimized more effectively. Images of high quality create a better first impression on users, are essential for SEO optimization, attract more online visitors, and contribute to the success of your website.

    What are the best free dating apps in India
    Indian dating apps and websites are portals based in India and operate mostly in Indian regions. They are mainly used by Indians living in India. Furthermore, Indians living abroad can also use these sites to find Indian partners in India. India is slowly gaining huge popularity for these sites as everyone is turning to digital channels in every industry. In addition to Indians, people from different ethnicities, religions, and countries also use these sites to find Indian partners.

    How to get 1000 followers on Instagram in 5 minutes
    Are you looking to reactivate your Instagram account by getting 1000 followers in just a few minutes? Or do you already have a decent following and wouldn't mind the extra followers?
    Either way, having more followers is always welcome as it allows you to increase the reach of your account appropriately.

    ReplyDelete
  2. This comment has been removed by a blog administrator.

    ReplyDelete